Brief Mumbai - Mangalore news with pictures
Kemmannu News Network, 02-08-2021 06:33:06
ಸಿದ್ಧಕಟ್ಟೆ : ಫಲ್ಗುಣಿ ರೋಟರಿ ಕ್ಲಬ್ನಿಂದ ಪತ್ರಿಕಾ ದಿನಾಚರಣೆ
ಸನ್ಮಾನಿಸಲ್ಪಟ್ಟ ಹಿರಿಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್
ಮುಂಬಯಿ (ಆರ್ಬಿಐ), ಜು.29: ಬಂಟ್ವಾಳ ತಾಲೂಕು ಇಲ್ಲಿನ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಕಳೆದ ಬುಧವಾರ (ಜು.28) ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಸಲ್ಪಟ್ಟಿತು. ಈ ಶುಭಾವಸರದಲ್ಲಿ ಸ್ಥಾನೀಯ ಹಿರಿಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಇವರನ್ನು ರೋಟರಿ ಕ್ಲಬ್ ಪದಾಧಿಕಾರಿಗಳು, ಅತಿಥಿüವರ್ಯರು ಸನ್ಮಾನಿಸಿ ಗೌರವಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮೈಕೆಲ್ ಡಿಕೋಸ್ತ ಅಧ್ಯಕ್ಷತೆಯ್ಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ, ಶಿಕ್ಷಕ ರಾಜೇಶ ನೆಲ್ಯಾಡಿ ಶುಭ ಹಾರೈಸಿದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಮತ್ತಿತರ ಗಣ್ಯರುಣ್ಯೌಪಸ್ಥಿತರಿದ್ದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ಸ್ವಾಗತಿಸಿ ಆಭಾರ ಮನ್ನಿಸಿದರು.
ಸಾಧುಸಂತರ ಸಂಸ್ಕೃತಿಗಳಲ್ಲಿ ಚಾತುರ್ಮಾಸ್ಯ ವ್ರತ ಅಗ್ರಮಾನ್ಯವಾದುದು
ಮುನಿಶ್ರೀ 108 ದಿವ್ಯಸಾಗರ ಮಹಾರಾಜ-ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಚಾತುರ್ಮಾಸ್ಯ
ಮುಂಬಯಿ (ಆರ್ಬಿಐ), ಜು.01: ಭಾರತೀಯ ಸಾಧುಸಂತರ ಸಂಸ್ಕೃತಿಗಳಲ್ಲಿ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯವಾದದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆ ತನಕ ನಡೆಸಲ್ಪಡುವ ಈ ವ್ರತ ಪುಣ್ಯಾಧಿ ಫಲದ ಧ್ಯೋತಕವಾಗಿದೆ ಎಂದು ಜೈನ ಕಾಶಿ ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಿಳಿಸಿದರು.
ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಮಠದಲ್ಲಿ ಕಳೆದ ಶನಿವಾರ (ಜು. 24) ಆರಂಭಿಸಲಾದ 2021ನೇ ವಾರ್ಷಿಕ ಚಾತುರ್ಮಾಸ ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದು ಮಳೆಗಾಲದಲ್ಲಿ ಜೀವಜಂತುಗಳು ಅತೀ ಹೆಚ್ಚು ಉತ್ಪತ್ತಿ ಯಾಗುವುದು ಮಹಾ ವ್ರತಧಾರಕ ಮುನಿಗಳು ತಪ್ಪಿಯೋ ಜೀವಹಿಂಸೆ ಆಗದಂತೆ ವ್ರತ ನಿಯಮ ಅನುಷ್ಠಾನಗಳಿಗೆ ಅಹಿಂಸೆ ಪಾಲನೆಗಾಗಿ ಚಾತುರ್ಮಸ ನಾಲ್ಕು ತಿಂಗಳು ಪೂರ್ಣ ರೂಪದಲ್ಲಿ ಆಚರಣೆ ಮಾಡುವುದು ರೂಢಿಯಾಗಿದೆ. ಭಟ್ಟಾರಕರು ದಶಲಕ್ಷಣ ಅಂದರೆ ಎರಡು ತಿಂಗಳು ಪೂರ್ಣ ಆಚರಣೆ ಮಾಡಿ ಜಪತಪ ಸ್ವಾಧ್ಯಯ ಪ್ರವಚನಗಳಿಗೆ ಸಮಯವನ್ನು ಸಮಾಜ ಬಾಂಧವರಿಗೆ ಧರ್ಮ ಜಾಗೃತಿ ಉಂಟು ಮಾಡಲು ಆತ್ಮಕಲ್ಯಾಣ, ಪರಕಲ್ಯಾಣಕ್ಕೆ ಚಾತುರ್ಮಸದಿಂದ ಸಾಧ್ಯ. ಈ ವರೆಗೆ ಇದು ಈ ಶತಮಾನದ ಮುನಿಗಳ 3ನೇ ಚಾತುರ್ಮಸವಾಗಿದೆ. ಈ ಹಿಂದೆ 2005ರಲ್ಲಿ ಆಚಾರ್ಯ ವಿರಾಗ ಸಾಗರ 2017ರಲ್ಲಿ ಗಿರಿನಾರ್ ಸಾಗರರ. ಇದೀಗ 108 ದಿವ್ಯ ಸಾಗರರ ಚಾತುರ್ಮಾಸ್ಯ ನಡೆಯುತ್ತಿದೆ. ಇಂತಹ ಧಾರ್ಮಿಕ ಪುಣ್ಯಾಧಿ ಕಾರ್ಯಕ್ರಮಗಳು ನಾಡಿನ ಎಲ್ಲರಿಗೂ ಧರ್ಮ ಲಾಭವಾಗಲಿ ಎಂದÀು ಮಂಗಳ ಶುಭ ನುಡಿಯನ್ನಾಡಿದರು.
ಚಾರುಕೀರ್ತಿ ಪಂಡಿತಾಚಾರ್ಯರು ಚಾತುರ್ಮಾಸ ಕಲಶಸ್ಥಾಪನೆಗೈದು ಮಂಗಲ ಶುಭಹಾರೈಕೆ ಮಾಡಿ ಪ್ರತಿ ಕ್ರಮಣ ಆಚಾರ್ಯ ಭಕ್ತಿ ಶಾಂತಿ ಭಕ್ತಿ, ಸಿದ್ದ ಭಕ್ತಿ, ದಿಶಾ ವಂದನಾ ದಿಗ್ ಬಂಧನ ನಿಯಮಗಳನ್ನು ಮೊದಲಾದ ಆಗಮೋಕ್ತ ಕ್ರಿಯಾ ಕಲಾಪ ನೆರವೇರಿಸಿದರು. ನಂತರ ಅರಿಹಂತರ ಪೂಜೆ ಸಿದ್ದರ ಅರ್ಗ್ಯ, ಮೂಲ ಸ್ವಾಮಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪೂಜೆ, ಗಣಧರ ಪೂಜೆ ನೆರವೇರಿಸಿದರು. ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಮೊಕ್ತೇಸರರು, ಶಂಭವ್ ಕುಮಾರ್ ಶಾಸ್ತ್ರ ದಾನ ಮಾಡಿದರು.
ಮಾಜಿ ಸಚಿವ, ಚಾತುರ್ಮಾಸ್ಯಸಮಿತಿ ಕಾರ್ಯಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ ಮುನಿಗಳ, ಸ್ವಾಮೀಜಿಯವರ ಚಾತುರ್ಮಾಸ ಸಂಧರ್ಭ ಧರ್ಮಲಾಭ ಪ್ರತೀಯೊಬ್ಬರು ಪಡೆಯುವಂತಾಗಲಿ. ಮೂಡುಬಿದಿರೆ ಜೈನ ಮಠದಲ್ಲಿ ನಮಗೆಲ್ಲರಿಗೂ ಸ್ವಾಮಿಜಿ ನೀಡಿದ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸೋಣ ಎಲ್ಲರ ಸಹಕಾರ ಇರಲಿ ಎಂದರು ಹಾಗೂ ಮುನಿ 108 ದಿವ್ಯ ಸಾಗರ ಮಹಾರಾಜರ ಪಾದಪೂಜೆ ನೆರವೇರಿಸಿದರು. ಅರ್ಘ್ಯ ಪಟ್ಟದ ಪುರೋಹಿತರು ಮೂಡುಬಿದಿರೆ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವತಿಯಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ, ಉತ್ತಮ ಭಕ್ತಿಗೀತೆ ಹಾಡಿದ ಸಂಗೀತಗಾರ್ತಿ ನಮಿತಾ ಜೈನ್ ಬೆಳಗಾಂನ ಇವರಿಗೆ ಮತ್ತು ಹಿರಿಯ ಸಾಹಿತಿ ಕಲಾವಿದ ರವಿರಾಜ ಜೈನ್, ಕೀ ಬೋರ್ಡ್, ತಬಲಾದೊಂದಿಗೆ ಸಹಕರಿದವರಿಗೆ ಕಲಾವಿದರಿಗೆ ಶ್ರೀಮಠದ ಪರವಾಗಿ ಚಾರುಕೀರ್ತಿ ಶ್ರೀಗಳು ಅಭಿವÀಂದಿಸಿ ಆಶೀರ್ವದಿಸಿದರು.
ಶೈಲೇ0ದ್ರ ಜೈನ್, ಯುವರಾಜ್ ಜೈನ್, ಪ್ರವೀಣ್ಚಂದ್ರ ಎಸ್., ಪಿ.ವಿದ್ಯಾ ಕುಮಾರ್, ಧನಕೀರ್ತಿ ಬಲಿಪ, ಸಂಜಯಂಥ ಕುಮಾರ್, ಡಾ| ಕೆ.ಪ್ರಭಚಂದ್ರ, ಬಾಹುಬಲಿ ಪ್ರಸಾದ್, ಶ್ರೀಪತಿ ಭಟ್, ಅಡ್ವಕೇಟ್ ಶ್ವೇತಾ ಜೈನ್, ಎಂಸಿಸಿ ಬ್ಯಾಂಕ್ನ ಎಸ್. ಚಂದ್ರಶೇಖರ್, ಶ್ರವಕಿಯರಾದ ವೃ0ದ, ವೀಣಾ, ಮಂಜುಳಾ, ವಿನಂತಿ ಸರೋಜಮ್ಮ, ಶಕುಂತಲಾ, ಮೋಹಿನಿ ವಿಮಲ್ ಕುಮಾರ್ ಮತ್ತಿತರÀರು ಉಪಸ್ಥಿತರಿದ್ದರು.
ಡಾ| ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಕು| ಪ್ರಮೆಯಿ, ಕು| ಖ್ಯಾತಿ ಪ್ರಾರ್ಥನೆಯನ್ನಾಡಿದರು.
ಉಪನ್ಯಾಸಕ ಕೆ.ನಮಿರಾಜ್ ಧನ್ಯವಾದ ಸಮರ್ಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು.
ಗುಜರಾತ್ ಬಿಲ್ಲವ ಸಂಘ ; 2021-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ದಯಾನಂದ ಬೋಂಟ್ರಾ (ಗೌರವಾಧ್ಯಕ್ಷ) - ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷ)
ಮುಂಬಯಿ (ಆರ್ಬಿಐ), ಜು.27: ಗುಜರಾತ್ ಬಿಲ್ಲವ ಸಂಘ (ಜಿಬಿಎಸ್) ಇದರ 9ನೇ ಮಹಾಸಭೆಯು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಜಿಬಿಎಸ್ನ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅಧ್ಯಕ್ಷತೆಯಲ್ಲಿ ಜರುಗಿದ್ದು, 2021-24ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಸರ್ವಾನುಮತದಿಂದ ಆಯ್ಕೆಯಾದರು.
ದಯಾನಂದ ಬೋಂಟ್ರಾ (ಗೌರವಾಧ್ಯಕ್ಷರು), ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷರು), ಮನೋಜ್ ಸಿ.ಪೂಜಾರಿ (ನಿಕಟಪೂರ್ವ ಅಧ್ಯಕ್ಷ), ವಾಸು ವಿ.ಸುವರ್ಣ ಬರೋಡಾ (ಪ್ರಧಾನ ಕಾರ್ಯದರ್ಶಿ), ಸುದೇಶ್ ವೈ.ಕೋಟ್ಯಾನ್ ಬರೋಡಾ (ಗೌರವ ಕೋಶಾಧಿಕಾರಿ), ಲಕ್ಷ ್ಮಣ್ ಪೂಜಾರಿ ಬರೋಡಾ, ವಿ.ಡಿ ಅಮೀನ್ ಅಹ್ಮದಾಬಾದ್, ಸದಾಶಿವ ಪೂಜಾರಿ ವಾಪಿ-ವಲ್ಸಾಡ್, ಹರೀಶ್ ಪೂಜಾರಿ ಅಂಕಲೇಶ್ವರ, ಗಣೇಶ್ ಗುಜರನ್ ಸೂರತ್, ಲೋಕಯ್ಯ ಪೂಜಾರಿ ಅಹ್ಮದಾಬಾದ್, ವಾಸು ಪೂಜಾರಿ ಬರೋಡಾ (ಉಪಾಧ್ಯಕ್ಷರು), ಸರಿತಾ ಸೋಮನಾಥ ಪೂಜಾರಿ ಬರೋಡಾ ಮತ್ತು ದಯಾನಂದ ಸಾಲಿಯಾನ್ ಬರೋಡಾ (ಜೊತೆ ಕಾರ್ಯದರ್ಶಿಗಳು), ರವಿ ಸಾಲಿಯಾನ್ ಬರೋಡಾ (ಜೊತೆ ಕೋಶಾಧಿಕಾರಿ), ಜಿನ್ರಾಜ್ ಪೂಜಾರಿ ಬರೋಡಾ (ಮುಖ್ಯ ಸಂಚಾಲಕರು), ರೋಹಿದಾಸ್ ಪೂಜಾರಿ (ಸಂಚಾಲಕರು) ಸುಮನ್ಲಾಲ್ ಕೊಡಿಯಾಲ್ಬೈಲ್ (ಸಂಚಾಲಕರು, ಅಹ್ಮದಾಬಾದ್), ಪ್ರಭಾಕರ್ ಪೂಜಾರಿ (ಸಂಚಾಲಕರು, ಸೂರತ್), ರಮೇಶ್ ಪೂಜಾರಿ (ಸಂಚಾಲಕರು, ವಾಪಿ-ವಲ್ಸಾಡ್), ಜಯಾನಂದ ಪೂಜಾರಿ (ಸಂಚಾಲಕರು, ಅಂಕ್ಲೇಶ್ವರ) ಆಯ್ಕೆ ಗೊಂಡರು.
ವಿಶ್ವನಾಥ ಜಿ.ಪೂಜಾರಿ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದಲ್ಲಿನ ಸೀಮಾ ಸದನ್ ಲಕ್ಷಿ ್ಮೀ ನಿವಾಸ್ ನಿವಾಸಿ ಕೃಷಿಕರಾದ ಗಿರಿಯಪ್ಪ ಪೂಜಾರಿ ಮತ್ತು ಲಕ್ಷ್ಮೀ ಪೂಜಾರಿ ದಂಪತಿ ಸುಪುತ್ರರಾಗಿ ಜನಿಸಿದ್ದು, ಕುರಿಯಾಳ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಫಿಲೋಮೆನಾ ಹೈಸ್ಕೂಲು ಪುತ್ತೂರು ಇಲ್ಲಿ ಪ್ರೌಢ ವಿದ್ಯಾಭ್ಯಾಸ ಪೂರೈಸಿ 1987ರಲ್ಲಿ ಬೃಹನ್ಮುಂಬಯಿಗೆ ಆಗಮಿಸಿ ಮುಂಬಯಿ ಬೋರಿವಿಲಿ ಇಲ್ಲಿನ ಸೈಂಟ್ ಫ್ರಾನ್ಸಿಸ್ ಶಿಕ್ಷಣ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಇಂಜಿನೀಯರಿಂಗ್ (ಡಿಪೆÇ್ಲೀಮಾ) ಪಧವೀದರÀರಾದರು. ಬಳಿಕ ಸೂರತ್ಗೆ ತೆರಳಿ ಲಕ್ಷಿ ್ಮೀ ಇಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಸ್ವಉದ್ಯಮ ಆರಂಭಿಸಿ ಇದೀಗ ಈ ಸಂಸ್ಥೆ ಸುಮಾರು ಎರಡುವರೆ ದಶಕಗಳ ಸಾಧನೆಯ ಹಾದಿಯಲ್ಲಿದೆ.
ತೀರಾ ಸರಳ, ಸಜ್ಜನಿಕೆ, ಮಿತಭಾಷಿ ಆಗಿರುವ ವಿಶ್ವನಾಥ್ ಸುಮಾರು ಮೂವತ್ತು ವರ್ಷಗಳಿಂದ ಸೂರತ್ ಮೆಟ್ರೋಪಾಲಿಟನ್ ಪ್ರದೇಶವನ್ನೇ ಕರ್ಮಭೂಮಿಯನ್ನಾಗಿಸಿ ಬಾರ್ಡೋಲಿ ಪುರಸಭಾ (ಪಟ್ಟಣ) ವ್ಯಾಪ್ತಿಯಲ್ಲಿ ನೆಲೆಯಾಗಿರುವ ವಿಶ್ವನಾಥ್ ಸ್ಥಾನೀಯ ಕರ್ನಾಟಕ ಸಂಘ, ಬಿಲ್ಲವ, ತುಳು, ಕನ್ನಡ, ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರು, ಪೆÇೀಷಕರು, ಕೊಡುಗೈದಾನಿಯಾಗಿ ಸೇವಾ ನಿರತರಾಗಿದ್ದಾರೆ. ಈ ತನಕ ಜಿಬಿಎಸ್ ಸೂರತ್ ಶಾಖೆಯ ಸಾರಥ್ಯ ವಹಿಸಿದ್ದ ಇವರು ಇದೀಗ ಮಾತೃ ಸಂಸ್ಥೆ ಗುಜರಾತ್ ಬಿಲ್ಲವ ಸಂಘದ ಚುಕ್ಕಾಣಿಯನ್ನಿಡಿದಿದ್ದಾರೆ.
ರಾಮಕೃಷ್ಣ ಆರ್. ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ನೂತನ ಅಧ್ಯಕ್ಷ
ಮುಂಬಯಿ (ಆರ್ಬಿಐ), ಜು.30: ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ಇದರ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ರಾಮಕೃಷ್ಣ ಆರ್. (ಸಂಯುಕ್ತ ಕರ್ನಾಟಕ) ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಆಗಿ ವೇಣು ವಿನೋದ್ (ವಿಜಯವಾಣಿ) ಹಾಗೂ ಕೋಶಾಧಿಕಾರಿ ಆಗಿ ಹರ್ಷ (ಡೆಕ್ಕನ್ ಹೆರಾಲ್ಡ್) ಆಯ್ಕೆ ಆಗಿದ್ದಾರೆ. ಇಂದಿಲ್ಲಿ ಪತ್ರಿಕಾ ಭವನದಲ್ಲಿ ಟ್ರಸ್ಟ್ ನ ಅಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕೋವಿಡ್-19 ಸಂದರ್ಭದಲ್ಲಿ ಪತ್ರಿಕಾಭವನ ಟ್ರಸ್ಟ್ ವತಿಯಿಂದ 2020ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ 246 ಸದಸ್ಯರಿಗೆ ರೂಪಾಯಿ 2,80,088 ಮೊತ್ತದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. 2021ನೇ ಸಾಲಿನಲ್ಲಿ 311 ಪತ್ರಕರ್ತರಿಗೆ ರೂಪಾಯಿ 2,15,110 ಮೊತ್ತದ ಅಕ್ಕಿ ಕಿಟ್ಗಳನ್ನು ಟ್ರಸ್ಟ್ನಿಂದ ನೀಡಲಾಗಿದೆ. ಪತ್ರಕರ್ತರಿಗೆ ಈ ಕಿಟ್ಗಳನ್ನು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ವಿತರಿಸಲಾಗಿದೆ.
ಟ್ರಸ್ಟ್ ನ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಮತ್ತು ಎಲ್ಲಾ ಟ್ರಸ್ಟಿಗಳಿಗೂ ಆನಂದ ಶೆಟ್ಟಿ ಅಭಿವಂದಿಸಿದರು.
ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮತ್ತು ಟ್ರಸ್ಟೀ ಬಿ. ರವೀಂದ್ರ ಶೆಟ್ಟಿ ಉಪಸ್ಥಿತರಿದ್ದು ಟ್ರಸ್ಟ್ನ ಕೋಶಾಧಿಕಾರಿ ರವಿ ಪೆÇಸವಣಿಕೆ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ವಂದಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷ ಕೆ.ಸದಾಶಿವ ಶೆಣೈ
ಮುಂಬಯಿ (ಆರ್ಬಿಐ), ಜು.26: ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸಚಿವಾಲದ ಅಧೀನತ್ವದ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಕೆ.ಸದಾಶಿವ ಶೆಣೈ ನೇಮಕ ಗೊಳಿಸಿದೆ. ಸರಕಾರವು ನೇಮಕಾತಿ ಆದೇಶ ಹೊರಡಿಸಿರುವುದ್ದನ್ನು ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತಾ ಅಧಿಕೃತವಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಕಾಡೆಮಿಯ ನಿಯಮಾವಳಿಯ ರೀತ್ಯ ಪ್ರದತ್ತವಾಗಿರುವ ಅಧಿಕಾರದಂತೆ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ಒಳಗೊಂಡು ಒಟ್ಟು ಹತ್ತು ಸದಸ್ಯರನ್ನು ನೇಮಕಾತಿ ಮಾಡಿರುತ್ತದೆ. ಕೆ.ಸದಾಶಿವ ಶೆಣೈ ಮತ್ತು ಇತರೇ ಒಂಬತ್ತು ಸದಸ್ಯರುಗಳೆಂದರೆ ಗೋಪಾಲ ಸಿ.ಯಡಗೆರೆ, ಕೆ.ಕೆ ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್, ಶಿವಾನಂದ ತಗಡೂರು, ಸಿ.ಕೆ ಮಹೇಂದರ್, ಜಗನ್ನಾಥ ಶೆಟ್ಟಿ ಬಾಳ, ದೇವೇಂದ್ರಪ್ಪ ಕಪನೂರು, ಕೆ.ವಿ ಶಿವಕುಮಾರ್ ಆಗಿರುತ್ತಾರೆ.
ಜಗನ್ನಾಥ ಶೆಟ್ಟಿ ಬಾಳ:
ಪತ್ರಿಕೋದ್ಯಮದಲ್ಲಿ ಸುಮಾರು ಮೂರು ದಶಕಗಳ ಅವಿರತ ಸೇವೆ ಸಲ್ಲಿಸಿರುವ ಜಗನ್ನಾಥ ಶೆಟ್ಟಿ ಬಾಳ ಜಯಕಿರಣ ಕನ್ನಡ ದೈನಿಕದಲ್ಲಿ ಕಳೆದ ಒಂದುವರೆ ದಶಕದಿಂದ ಹಿರಿಯ ವರದಿಗಾರ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲ್ಯೂಜೆಎಸ್) ಇದರ ದ.ಕ ಜಿಲ್ಲಾ ಕೇಂದ್ರ ಸಮಿತಿ ಪ್ರತಿನಿಧಿಯಾಗಿರುವರು. ಈ ಹಿಂದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದು 2018ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, 2008ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವರು.
ಈ ಹಿಂದೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಆಗಿದ್ದ ದ.ಕ ಜಿಲ್ಲಾ ಬೆಳ್ತಂಗಡಿ ಮೂಲತಃ ಸದಾಶಿವ ಶೆಣೈ, ಸದ್ಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಜಗನ್ನಾಥ ಶೆಟ್ಟಿ ನೇಮಕಾತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಆಫ್ ಮಂಗಳೂರು, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ದಕ್ಷಿಣ ಕನ್ನಡ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.
ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಆಯ್ಕೆ
ಮುಂಬಯಿ (ಆರ್ಬಿಐ), ಜು.27: ದಿ ನ್ಯೂಸ್ 24 ಮಂಗಳೂರು ವರದಿಗಾರ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಮತ್ತು ಭಾಸ್ಕರ ರೈ ಕಟ್ಟ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇಂದಿಲ್ಲಿ ಮಂಗಳವಾರ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಹಕಾರ ಸಂಘದ ಹಿರಿಯ ನಿರೀಕ್ಷಕ ಶಿವಲಿಂಗಯ್ಯ.ಎಂ ಚುನಾವಣಾಧಿಕಾರತ್ವದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಪ್ರಕ್ರಿಯೆಯಲ್ಲಿ ಉಭಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಸಲ್ಪಟ್ಟಿತು.
ಸಂಘದ ನಿರ್ದೇಶಕರಾದ ಕೇಶವ ಕುಂದರ್, ಪುಷ್ಪರಾಜ್ ಬಿ.ಎನ್, ಇಬ್ರಾಹಿಂ ಅಡ್ಕಸ್ಥಳ, ಆರಿಫ್ ಪಡುಬಿದ್ರೆ, ಜಿತೇಂದ್ರ ಕುಂದೇಶ್ವರ, ಆತ್ಮಭೂಷಣ್ ಭಟ್, ಸತ್ಯವತಿ, ಕೆ.ವಿಲ್ಫ್ರೆಡ್ ಡಿಸೋಜ, ಹರೀಶ್ ಮೋಟುಕಾನ, ವಿಜಯ ಕೋಟ್ಯಾನ್ ಪಡು, ಸುಖ್ಪಾಲ್ ಪೆÇಳಲಿ, ಸುರೇಶ್ ಡಿ.ಪಳ್ಳಿ, ಶಿಲ್ಪಾ ಕುಮಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿರಿ ಅಭಿಷೇಕ್.ಕೆ ಉಪಸ್ಥಿತರಿದ್ದರು.
ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಗೆ ಇತ್ತೀಚೆಗೆ ಚುನಾವಣೆ ನಡೆಸಲ್ಪಟ್ಟಿದ್ದು 15 ಸ್ಥಾನಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ 9 ಸಾಮಾನ್ಯ ಸ್ಥಾನಳಿಗೆ ಮತ್ತು ಹಿಂದುಳಿದ ವರ್ಗ ಎ ಮೀಸಲು 2 ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿತ್ತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Milagres Cathedral celebrates Sacerdotal Ruby Jubilee of Mngr Ferdinand Gonsalves and Parish Community Day with grandeur

Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu
