ಉಡುಪಿ ಜಿಲ್ಲೆ :66 ಮತದಾನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67.76 ಮತದಾನ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಸರಾಸರಿ ಒಟ್ಟು ಶೇ. 66.16 ಮತದಾನ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಉಡುಪಿ ತಾಲೂಕಿನಲ್ಲಿ ಶೇ.63.5, ಕಾರ್ಕಳ ತಾಲೂಕಿನಲ್ಲಿ ಶೇ.70 ಮತ್ತು ಕುಂದಾಪುರ ತಾಲೂಕಿನಲ್ಲಿ ಶೇ.65 ಮತದಾನವಾಗಿದೆ.
ಆರಂಭದಲ್ಲಿಯೇ ಮಂದಗತಿಯಲ್ಲಿ ಮತದಾನ ನಡೆದಿತ್ತು. ಅಪರಾಹ್ನವಾಗುತ್ತಿದ್ದಂತೆ ಮತದಾನಕ್ಕೆ ಸ್ವಲ್ಪ ವೇಗ ದೊರಕಿತು. ಮತದಾರರಿಗೆ ಅಷ್ಟೊಂದು ಆಸಕ್ತಿ ಕಾಣದೆ ಇರುವುದು ವ್ಯಕ್ತವಾಗುತ್ತಿತ್ತು. ಆದರೆ ಕಾರ್ಯಕರ್ತರು ಹುಮ್ಮಸ್ಸಿನಿಂದಲೇ ಇದ್ದರು.
ಜಿ.ಪಂ. ಚುನಾವಣೆಗೆ 74 ಸ್ಪರ್ಧಾಳುಗಳು, ಮೂರು ತಾ.ಪಂ. ಸಂಸ್ಥೆಗಳಲ್ಲಿ 238 ಸ್ಪರ್ಧಾಳುಗಳಿದ್ದಾರೆ. ಒಟ್ಟು 312 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು ಇದು ಜ.4ರಂದು ಬಹಿರಂಗವಾಗಲಿದೆ.
ಜಿಲ್ಲೆಯ ಒಟ್ಟು 721 ಮತಗಟ್ಟೆಗಳಲ್ಲಿ (ಉಡುಪಿ-298, ಕುಂದಾಪುರ -278, ಕಾರ್ಕಳ-145) ಒಟ್ಟು 1,880 ಕಂಟ್ರೋಲ್ ಯೂನಿಟ್ (ಉಡುಪಿ-727, ಕುಂದಾಪುರ-673, ಕಾರ್ಕಳ-480), 1,730 ಬ್ಯಾಲೆಟ್ ಯೂನಿಟ್ (ಉಡುಪಿ-727, ಕುಂದಾಪುರ-683, ಕಾರ್ಕಳ-320) ಬಳಕೆಯಾಗಿದ್ದು ಇವುಗಳನ್ನು ಶುಕ್ರವಾರ ಮತದಾನವಾದ ಬಳಿಕ ಡಿಮಸ್ಟರಿಂಗ್ ಕೇಂದ್ರಗಳಾದ ಉಡುಪಿಯ ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಪ್ರೌಢಶಾಲೆ, ಕುಂದಾಪುರದ ಭಂಡಾರ್ಕಾರ್ಸಿ ಕಾಲೇಜು, ಕಾರ್ಕಳದ ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿಗೆ ಪೊಲೀಸ್ ಬಂದೋಬಸ್ತಿನಲ್ಲಿ ಚುನಾವಣಾಧಿಕಾರಿಗಳು ಕೊಂಡೊಯ್ದರು.
ಇಲ್ಲಿ ಬಿಗಿಭದ್ರತೆಯಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗಿದ್ದು ಮತ ಎಣಿಕೆಯು ಈ ಕೇಂದ್ರಗಳಲ್ಲಿ ಜ.4ರ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಆ ತಾಲೂಕಿನ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಜಿ.ಪಂ.ನ 25 ಸ್ಥಾನಗಳಲ್ಲಿ ಉಡುಪಿ ತಾಲೂಕಿನ 11 ಸ್ಥಾನಗಳಲ್ಲಿ 33 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 11 ಮಂದಿ, ಜೆಡಿಎಸ್ನ 5, ಎಸ್ಡಿಪಿಐ ಮೂವರು, ಇಬ್ಬರು ಪಕ್ಷೇತರರು ಕಣದಲ್ಲಿದ್ದಾರೆ. ಕಾರ್ಕಳ ತಾಲೂಕಿನ ಐದು ಸ್ಥಾನಗಳಲ್ಲಿ ಒಟ್ಟು 13 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಐದು, ಜೆಡಿಎಸ್ 1, ಪಕ್ಷೇತರರು ಇಬ್ಬರು ಇದ್ದಾರೆ. ಕುಂದಾಪುರ ತಾಲೂಕಿನ 9 ಸ್ಥಾನಗಳಲ್ಲಿ ಒಟ್ಟು 28 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 9, ಜೆಡಿಎಸ್ನ 6, ಸಿಪಿಐಎಂ, ಬಿಎಸ್ಪಿ, ಎಸ್ಡಿಪಿಐ, ಪಕ್ಷೇತರರು ತಲಾ ಒಬ್ಬರು ಕಣದಲ್ಲಿದ್ದಾರೆ. ಉಡುಪಿ ತಾ.ಪಂ.: 41 ಸದಸ್ಯ ಬಲದ ಉಡುಪಿ ತಾ.ಪಂ.ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 41, ಜೆಡಿಎಸ್ನ 13, ಸಿಪಿಐಎಂ 1, ಎಸ್ಡಿಪಿಐ ಪಕ್ಷೇತರರು ತಲಾ ಐದು ಒಟ್ಟು 106 ಮಂದಿ ಕಣದಲ್ಲಿದ್ದಾರೆ.
ಕಾರ್ಕಳ ತಾ.ಪಂ.: ಇಲ್ಲಿನ 19 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ತಲಾ 19, ಪಕ್ಷೇತರರು ಇಬ್ಬರು ಸೇರಿದಂತೆ ಒಟ್ಟು 40 ಮಂದಿ ಕಣದಲ್ಲಿದ್ದಾರೆ.
ಕುಂದಾಪುರ ತಾ.ಪಂ.: ಇಲ್ಲಿನ 35 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ನ ತಲಾ 35, ಜೆಡಿಎಸ್ನ 13, ಸಿಪಿಐಎಂನ ಆರು, ಪಕ್ಷೇತರರು ಇಬ್ಬರು, ಎಸ್ಡಿಪಿಐನ ಒಬ್ಬರು ಅಭ್ಯರ್ಥಿಗಳು ಒಟ್ಟು 92 ಮಂದಿ ಕಣದಲ್ಲಿ ಉಳಿದಿದ್ದಾರೆ.
ಉಡುಪಿ ತಾಲೂಕಿನಲ್ಲಿ 2,87,765 ಮತದಾರರು (ಪು-1,33,778, ಮ-1,53,987), ಕುಂದಾಪುರ ತಾಲೂಕಿನಲ್ಲಿ 2,53,162 (ಪು-1,16,363, ಮ-1,36,799), ಕಾರ್ಕಳ ತಾಲೂಕಿನಲ್ಲಿ 1,30,785 (ಪು-59,923, ಮ-70,862) ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,71,712 ಮತದಾರರು (ಪು-3,10,064, ಮ-3,61,648) ಇದ್ದು ಇವರಲ್ಲಿ ಶೇ. 66 ಮತದಾರರು ಮತದಾನ ಮಾಡಿದರು.
ಜಿಲ್ಲೆಯಲ್ಲಿ ನಕ್ಸಲ್ಪೀಡಿತ 47 ಮತಗಟ್ಟೆಗಳಿದ್ದು ಇಂತಹ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ಕಡೆ ಅಹಿತಕರ ಘಟನೆ ನಡೆದಿಲ್ಲ.
ಪ್ರಥಮ-ಕೊನೆಯ ಮತಪೆಟ್ಟಿಗೆಉಡುಪಿ ತಾಲೂಕಿನಲ್ಲಿ ಡಿಮಸ್ಟರಿಂಗ್ ಕೇಂದ್ರಕ್ಕೆ ಬಂದ ಪ್ರಥಮ ಮತಪೆಟ್ಟಿಗೆ ಉಡುಪಿಗೆ ಸಮೀಪವಿರುವ 150ನೆಯ ಅಂಬಲಪಾಡಿ ಮತಗಟ್ಟೆಯದು.
ಮಸ್ಟರಿಂಗ್-ಡಿಮಸ್ಟರಿಂಗ್ ಚಹಾ
ಮಸ್ಟರಿಂಗ್-ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆ ಒಯ್ಯುವ/ತಂದಿಡುವ ಸಿಬಂದಿಗಳಿಗೆ ಅನುಕೂಲವಾಗಲು ಕ್ಯಾಂಟೀನ್ ತೆರೆದಿರುವುದು ಇದೇ ಪ್ರಥಮ ಎನ್ನಲಾಗಿದೆ. ಇನ್ನು ಮತ ಎಣಿಕೆ ದಿನ ಬರುವ ಸಾರ್ವಜನಿಕರಿಗೂ ಕ್ಯಾಂಟೀನ್ ತೆರೆದರೆ ಸೇವಾ ವಿಸ್ತರಣೆಯಾದಂತಾಗುತ್ತದೆ.
ಮಕ್ಕಳಪ್ರೀತಿ ತೋರಿದ ಅಧಿಕಾರಿ
ಮತದಾನ ಮಾಡುವಾಗ ಹಿರಿಯರೊಂದಿಗೆ, ತಾಯಂದಿರೊಂದಿಗೆ ಮಕ್ಕಳು ಬರುವುದು ಸಹಜ. ಇವರ ಹಠಮಾರಿತನವನ್ನು ಶಮನಗೊಳಿಸಲು ಕಲ್ಯಾಣಪುರ ನೇಜಾರು ಮತಗಟ್ಟೆ ಅಧಿಕಾರಿ ಉಡುಪಿಯ ಶಿಕ್ಷಕ ಚಂದ್ರಶೇಖರ ಅಡಿಗರು ಕಂಡುಹಿಡಿದ ಉಪಾಯವೆಂದರೆ ಬಿಸ್ಕತ್ತು, ಚಾಕಲೆಟುಗಳನ್ನು ತಂದಿಟ್ಟು ಕೊಟ್ಟದ್ದು. ಈ ಖರ್ಚಿಗೇನೂ ಸರಕಾರ ಕೊಡುವುದಿಲ್ಲ, ಇದೇನಿದ್ದರೂ ಸ್ವಂತ ಖರ್ಚಿನಿಂದ!
ಕಂಚಿನಡ್ಕದಲ್ಲಿ ರಾತ್ರಿವರೆಗೂ ಮತದಾನ
ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ಕಂಚಿನಡ್ಕದಲ್ಲಿ ಸಂಜೆ 5 ಗಂಟೆಯೊಳಗೆ ಮತದಾನ ಮುಗಿಯಲಿಲ್ಲ. ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದ ಕಾರಣ ಅವರಿಗೆ ಚೀಟಿ ವಿತರಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ರಾತ್ರಿ 7.10 ಗಂಟೆವರೆಗೂ ಸುಮಾರು ನೂರು ಮತದಾರರು ಮತದಾನ ಮಾಡಿದರು. ಬೆಳಗ್ಗೆ ಮತಯಂತ್ರ ಕೆಟ್ಟು ಒಂದು ಗಂಟೆ ವಿಳಂಬವಾಗಿ ಮತದಾನ ನಡೆದದ್ದು ಮತ್ತು ಸುಮಾರು 1,500 ಮತದಾರರು ಇರುವ ಇಲ್ಲಿ ಎರಡು ಮತಗಟ್ಟೆಗಳನ್ನು ರದ್ದುಪಡಿಸಿ ಒಂದು ಮತಗಟ್ಟೆ ಮಾಡಿದ್ದು ತಡ ಮತದಾನಕ್ಕೆ ಕಾರಣವೆನ್ನಲಾಗಿದೆ.
ಕಡೆಕಾರಿನಲ್ಲಿ ಯಂತ್ರ ದೋಷ
ಕಡೆಕಾರಿನಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದ ಕಾರಣ ಆರಂಭದಲ್ಲಿ ಸುಮಾರು ಅರ್ಧ ಗಂಟೆ ಮತದಾನಕ್ಕೆ ವಿಳಂಬವಾಯಿತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ಗೆ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು ಶೇ.67.76 ಮತದಾನವಾಗಿದೆ.9,25,969 ಮತದಾರರ ಪೈಕಿ 3,09,360 ಪುರುಷರು ಹಾಗೂ 3,18,035 ಮಹಿಳೆಯರು ಸೇರಿದಂತೆ ಒಟ್ಟು 6,27,395 ಮಂದಿ ಮತಚಲಾಯಿಸಿದ್ದಾರೆ.
ಜಿಲ್ಲಾ ಪಂಚಾಯತ್ನ 35 ಸ್ಥಾನಗಳಿಗೆ ಹಾಗೂ 5 ತಾಲೂಕು ಪಂಚಾಯತ್ಗಳ 129 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಬೆಳಗ್ಗೆ ಮಂದಗತಿಯಲ್ಲಿ ಮತದಾನ ಸಾಗಿದ್ದು ಮಧ್ಯಾಹ್ನ 1 ಗಂಟೆಯವರೆಗೆ ಶೇ. 37 ರಷ್ಟು ಮತಚಲಾವಣೆಯಾಗಿತ್ತು. ಮಧ್ಯಾಹ್ನ ಬಳಿಕ ಮತದಾನ ಪ್ರಕ್ರಿಯೆ ಬಿರುಸುಗೊಂಡಿತ್ತು.
ಪುತ್ತೂರು ತಾಲೂಕಿನಲ್ಲಿ ಒಟ್ಟು 1,58,119 ಮತದಾರರಲ್ಲಿ 55,224 ಪುರುಷರು ಹಾಗೂ 54,446 ಮಹಿಳೆಯರು ಸೇರಿದಂತೆ ಒಟ್ಟು 1,09,670 ಮಂದಿ ಮತ ಚಲಾಯಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು ಶೇ. 69.36 ಮತದಾನವಾಗಿದೆ. ತಾಲೂಕಿನ 6 ಜಿ.ಪಂ ಹಾಗೂ ತಾ.ಪಂ.ನ 22 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಸುಳ್ಯ ತಾಲೂಕಿನಲ್ಲಿ ಒಟ್ಟು 87,889 ಮತದಾರರಲ್ಲಿ 64,971 ಮಂದಿ ಮತಚಲಾಯಿಸಿದ್ದು , 32,752 ಪುರುಷರು, 32,219 ಮಹಿಳೆಯರು ಮತದಾನ ಮಾಡಿದ್ದಾರೆ. ಒಟ್ಟು ಶೇ.73.92 ಮತದಾನವಾಗಿದೆ. ತಾಲೂಕಿನ 4 ಜಿ.ಪಂ. ಸ್ಥಾನಗಳಿಗೆ ಹಾಗೂ ತಾಲೂಕಿನ ಪಂಚಾಯತ್ನ 13 ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 2,40,888 ಮತದಾರರ ಪೈಕಿ 1,69,943 ಮಂದಿ ಮತ ಚಲಾಯಿಸಿದ್ದು ಶೇ.70.55 ಮತದಾನವಾಗಿದೆ. ಇಲ್ಲಿ 84271 ಪುರುಷರು ಹಾಗೂ 85,672 ಮಹಿಳೆಯರು ಮತಚಲಾಯಿಸಿದ್ದಾರೆ. ತಾಲೂಕಿನ ಒಟ್ಟು 9 ಜಿ.ಪಂ. ಸ್ಥಾನಗಳಿಗೆ ಹಾಗೂ 33 ತಾ.ಪಂ. ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಮಂಗಳೂರು ತಾಲೂಕಿನಲ್ಲಿ ಒಟ್ಟು 2,63,423 ಮತದಾರರ ಪೈಕಿ ಮತದಾರರು 1,71,799 ಮಂದಿ ಮತ ಚಲಾಯಿಸಿದ್ದು ಶೇ 65.22 ಮತದಾನವಾಗಿದೆ. ಮತದಾನ ಮಾಡಿದವರಲ್ಲಿ 90,285 ಮಹಿಳೆಯರು ಹಾಗೂ 81,514 ಮಂದಿ ಪುರುಷರು. ತಾಲೂಕಿನ ಒಟ್ಟು 10 ಜಿ.ಪಂ. ಸ್ಥಾನಗಳಿಗೆ ಹಾಗೂ 37 ತಾ.ಪಂ. ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಬೆಳ್ತಂಗಡಿ ತಾಲೂಕಿನಲ್ಲಿ 1,75,650 ಮತದಾರರ ಪೈಕಿ 55,370 ಮಹಿಳೆಯರು ಹಾಗ 55,641 ಪುರುಷರು ಸೇರಿದಂತೆ 1,11,011 ಮಂದಿ ಚಲಾಯಿಸಿದ್ದು ಶೇ.63.20 ಮತದಾನವಾಗಿದೆ. ಇಲ್ಲಿ 6 ಜಿ.ಪಂ.ಸ್ಥಾನಗಳು ಹಾಗೂ 24 ತಾ.ಪಂ. ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಮತದಾನ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಬಂದೋಬಸ್ತು ಮಾಡಲಾಗಿತ್ತು. ಕೆಲವೆಡೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದೆ. ಗೋಳ್ತಮಜಲು ಜಿ.ಪಂ. ಕ್ಷೇತ್ರದಲ್ಲಿ ಮತಗಟ್ಟೆಯೊಂದರ ಬಳಿ ಪಕ್ಷದ ಪರವಾಗಿ ಪ್ರಚಾರ ನಡೆಸಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಕಡೆಗಳಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಸಾಗಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೆಟ್ಟು ಮತದಾನಕ್ಕೆ ಕೆಲಹೊತ್ತು ಅಡಚಣೆಯಾದ ಪ್ರಸಂಗಗಳು ನಡೆದಿವೆ. ಕೆಲವು ಕಡೆಗಳಲ್ಲಿ ಮತಗಟ್ಟೆಗಳ ಅಧಿಕಾರಿಗಳ ಬಳಿ ಇದ್ದ ಮತದಾರರ ಪಟ್ಟಿಯಲ್ಲಿ ಹೆಸರುಗಳಿಲ್ಲದ ಕಾರಣ ಮತಚಲಾಯಿಸಲು ಸಾಧ್ಯವಾಗದೆ ಕೆಲವು ಮತದಾರರು ಹಿಂದಿರುಗಿದ ಘಟನೆಗಳು ನಡೆದಿವೆ. ಅವರಲ್ಲಿ ಕೆಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕೈಬಿಡಲಾದ ಪಟ್ಟಿಯಲ್ಲಿದ್ದರೆ ಇನ್ನೂ ಕೆಲವರ ಹೆಸರುಗಳೇ ಇರಲಿಲ್ಲ.
ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಉತ್ತಮ ಮತದಾನ
ನಕ್ಸಲ್ಪೀಡಿತ ಪ್ರದೇಶಗಳೆಂದು ಗುರುತಿಸಲಾದ ಪ್ರದೇಶಗಳಲ್ಲಿ ಮತದಾರರಿದಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ಯವಾಗಿದ್ದು ಉತ್ತಮ ಮತದಾನವಾಗಿದೆ. ಈ ಪ್ರದೇಶಗಳಲ್ಲಿ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಕಂಡುಬಂದಿತ್ತು. ಕೆಲವು ಕಡೆಗಳಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ. 50 ರಷ್ಟು ಮತದಾನವಾಗಿತ್ತು. ಬೆಳ್ತಂಗಡಿಯ ಎಳನೀರಿನಲ್ಲಿ ಮೂಲಭೂತ ಸೌಕರ್ಯ ಆಗ್ರಹಿಸಿ ಮತದಾರರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದ ಹಿನ್ನಲೆಯಲ್ಲಿ ಅಲ್ಲಿ ಮತದಾನ ನಡೆಯಲಿಲ್ಲ.
ಭಾವಚಿತ್ರ ಸಹಿತ ಮತದಾರರ ಗುರುತು ಚೀಟಿ ಇಲ್ಲದ ಮತದಾರರಿಗೆ ಪಡಿತರ ಚೀಟಿ, ಪಾನ್ಕಾರ್ಡ್ ಸೇರಿದಂತೆ ಚುನಾವಣಾ ಆಯೋಗದಿಂದ ಅನುಮೋದನೆಗೊಂಡಿದ್ದ 21 ಗುರುತುಪತ್ರಗಳಲ್ಲಿ ಯಾವುದಾದರೂ ಒಂದನ್ನು ಹಾಜರು ಪಡಿಸಿದರೆ ಮತದಾನಕ್ಕೆ ಅವಕಾಶ ನೀಡಲಾಯಿತು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Obituary : Miss Judith Lewis (91), Milagres A Ward, Kallianpur
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link