ವಿಶ್ವಕಪ್‌ಗೆ ಟೀಮ್‌ ಇಂಡಿಯಾ


UDAYAVANI, 18-01-2011 12:09:48


Write Comment     |     E-Mail To a Friend     |     Facebook     |     Twitter     |     Print


ಚೆನ್ನೈ : ಭಾರತೀಯ ಉಪಖಂಡದಲ್ಲಿ ಇನ್ನೊಂದೇ ತಿಂಗಳಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಟೀಮ್‌ ಇಂಡಿಯಾವನ್ನು ಪ್ರಕಟಿಸಲಾಗಿದೆ. ಲೆಗ್‌ಸ್ಪಿನ್ನರ್‌ ಪೀಯೂಷ್‌ ಚಾವ್ಲಾ 15 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಯುವ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ಹಾಗೂ ವೇಗಿ ಎಸ್‌. ಶ್ರೀಶಾಂತ್‌ ಅವರನ್ನು ಆಯ್ಕೆಗಾರರು ಕೈಬಿಟ್ಟಿದ್ದಾರೆ.

 

IND

 

 

ಉಪಯುಕ್ತ ಬ್ಯಾಟ್ಸ್‌ಮನ್‌ ಎಂದೂ ಗುರುತಿಸಲಾಗುವ ತಮಿಳುನಾಡಿನ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ತಂಡದಲ್ಲಿ ಮೂರನೇ ತಜ್ಞ ಸ್ಪಿನ್ನರ್‌ ಆಗಿ ಸ್ಥಾನ ಪಡೆದಿದ್ದಾರೆ. ಚಾವ್ಲಾ ಆಯ್ಕೆಯಿಂದಾಗಿ ಪ್ರಗ್ಯಾನ್‌ ಓಝ ಸ್ಥಾನ ವಂಚಿತರಾದರು.

ಸೋಮವಾರ ಇಲ್ಲಿ ನಡೆದ ಆಯ್ಕೆಗಾರರ ಸಭೆಯ ಬಳಿಕ ಬಿಸಿಸಿಐ ಕಾರ್ಯದರ್ಶಿ ಎನ್‌. ಶ್ರೀನಿವಾಸನ್‌ ಅಂತಿಮ ತಂಡವನ್ನು ಪ್ರಕಟಿಸಿದರು.

 

 

IND2

 

 

 

ಗಾಯಾಳುಗಳ ಚಿಂತೆ

ಆಯ್ಕೆ ಸಭೆಗೆ ಮುನ್ನ ನಾಲ್ಕು ಮಂದಿ ಪ್ರಮುಖ ಆಟಗಾರರ ಗಾಯ ಚಿಂತೆಗೆ ಕಾರಣವಾಗಿತ್ತು. ಆದರೆ ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹವಾಗ್‌, ಗೌತಮ್‌ ಗಂಭೀರ್‌ ಮತ್ತು ವೇಗಿ ಪ್ರವೀಣ್‌ ಕುಮಾರ್‌ ಸಕಾಲದಲ್ಲಿ ಚೇತರಿಸಿಕೊಳ್ಳಬಹುದೆಂಬ ವಿಶ್ವಾಸದೊಂದಿಗೆ ನಾಲ್ವರನ್ನೂ ಆಯ್ಕೆ ಮಾಡಲಾಯಿತು.

ಮಹೇಂದ್ರ ಸಿಂಗ್‌ ಧೋನಿ ನಾಯಕ, ವೀರೇಂದ್ರ ಸೆಹವಾಗ್‌ ಉಪನಾಯಕರಾಗಿರುವ ತಂಡದಲ್ಲಿ 2008ರ ಬಳಿಕ ಒಂದೂ ಏಕದಿನ ಪಂದ್ಯ ಆಡದ ಪೀಯೂಷ್‌ ಚಾವ್ಲಾ ಬಿಟ್ಟರೆ ಬೇರಾವುದೇ ದೊಡ್ಡ ಅಚ್ಚರಿಯ ಆಯ್ಕೆಗಳಿಲ್ಲ.

ತ್ರಿವಳಿ ಸ್ಪಿನ್ನರ್‌ಗಳು

ತಂಡವನ್ನು ಅಂತಿಮಗೊಳಿಸುವ ಮುನ್ನ ಒಂದೂವರೆ ಗಂಟೆ ಸಮಾಲೋಚಿಸಿದ ಆಯ್ಕೆಗಾರರು, ವಿಶ್ವಕಪ್‌ ಪಂದ್ಯಗಳು ಭಾರತ, ಶ್ರೀಲಂಕಾ, ಬಾಂಗ್ಲಾದೇಶದ ಸ್ಪಿನ್‌ಸ್ನೇಹಿ ಪಿಚ್‌ಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಹರ್ಭಜನ್‌ ಸಿಂಗ್‌ ನೇತೃತ್ವದ ಮೂವರು ಸ್ಪೆಷಲಿಸ್ಟ್‌ ಸ್ಪಿನ್ನರ್‌ಗಳಿಗೆ ಮಣೆ ಹಾಕಿದರು. ಪಾರ್ಟ್‌ಟೈಮ್‌ ಸ್ಪಿನ್ನರ್‌ಗಳಾದ ಸಚಿನ್‌, ಸೆಹವಾಗ್‌, ರೈನಾ, ಯೂಸುಫ್ ಪಠಾಣ್‌, ಯುವರಾಜ್‌ರನ್ನೂ ಪರಿಗಣಿಸಿದರೆ ತಂಡದಲ್ಲೀಗ 8 ಮಂದಿ ಸ್ಪಿನ್ನರ್‌ಗಳಿದ್ದಾರೆ!

ಲಭ್ಯವಿರುವ ಅತ್ಯುತ್ತಮ ತಂಡ

’ವಿಶ್ವಕಪ್‌ಗೆ ನಾವು ಲಭ್ಯವಿರುವ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದೇವೆ. ಆಯ್ಕೆ ಅಂತಿಮಗೊಳಿಸುವ ಮುನ್ನ ನಾವು ಎಲ್ಲ ಸಾಧಕ ಬಾಧಕಗಳ ಬಗ್ಗೆ ವಿಸ್ತೈತವಾಗಿ ಸಮಾಲೋಚಿಸಿದ್ದೇವೆ. ಪಿಚ್‌, ಎದುರಾಳಿಗಳು, ವಾತಾವರಣ... ಪ್ರತಿಯೊಂದು ಅಂಶವನ್ನೂ ಗಮನದಲ್ಲಿರಿಸಿಕೊಂಡು ಸಮತೋಲನದ ತಂಡವನ್ನು ಆಯ್ಕೆ ಮಾಡಿದ್ದೇವೆ’ ಎಂದು ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್‌ ಹೇಳಿದರು.

ಭಾರತದಲ್ಲಿ ಸ್ಪಿನ್‌ ಪಿಚ್‌ಗಳಿರುವ ಹಿನ್ನೆಲೆಯಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಕಾಂತ್‌ ಸಮಜಾಯಿಷಿ ನೀಡಿದರು.

’ನಾವು ಭಾರತದಲ್ಲಿ ಆಡುತ್ತಿದ್ದೇವೆ ಎನ್ನುವುದನ್ನು ಮರೆಯುವಂತಿಲ್ಲ. ತಿರುಗುವ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಮುಖ್ಯ ಪಾತ್ರ ವಹಿಸಲಿದ್ದಾರೆ. ತಂಡದಲ್ಲಿರುವ ಸಮತೋಲನ, ಬ್ಯಾಟಿಂಗ್‌ ಸರದಿಯಲ್ಲಿನ ಸಾಮರ್ಥ್ಯ ಎಲ್ಲವನ್ನೂ ಪರಿಗಣಿಸಿದರೆ, ಧೋನಿ ಸಾರಥ್ಯದ ತಂಡ ನಮ್ಮ ನಂಬಿಕೆ ಉಳಿಸಿಕೊಳ್ಳುವ ಭರವಸೆ ಇದೆ’ ಎಂದು ಶ್ರೀಕಾಂತ್‌ ಹೇಳಿದರು.

’ಹೆಚ್ಚು ಕಡಿಮೆ ಇದೇ ತಂಡ ಕಳೆದೆರಡು ವರ್ಷಗಳಿಂದ ಟೆಸ್ಟ್‌ ಹಾಗೂ ಏಕದಿನ ಮಾದರಿಗಳಲ್ಲಿ ಅತ್ಯುತ್ತಮವಾಗಿ ಆಡುತ್ತಿದೆ. ಈ ತಂಡ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಮೋಘವಾಗಿ ಆಡುತ್ತಿದೆ. ಈ ತಂಡ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವಕಪ್‌ ಗೆಲ್ಲುವ ವಿಶ್ವಾಸ ನಮಗಿದೆ’ ಎಂದು ಶ್ರೀಕಾಂತ್‌ ಹೇಳಿದರು.

ವಿಶ್ವಕಪ್‌ ಉಪಖಂಡದಲ್ಲಿ ನಡೆಯುತ್ತಿರುವ ಕಾರಣ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರಲಿದೆ ಎಂದು ಶ್ರೀಕಾಂತ್‌ ಹೇಳಿದರು.

ಭಾರತದಲ್ಲಿ ಹಾಗೂ ಉಪಖಂಡದಲ್ಲಿ ಆಡುವಾಗ ಆಟಗಾರರ ಮೇಲೆ ಹಾಗೂ ಆಯ್ಕೆಗಾರರ ಮೇಲೆ ವಿಶೇಷ ಒತ್ತಡವಿರುತ್ತದೆ. ಆದರೆ, ಈ ತಂಡ 1983ರ ಸಾಧನೆ ಪುನರಾವರ್ತಿಸಿ ವಿಶ್ವಕಪ್‌ ಗೆಲ್ಲಲಿದೆ ಎಂದು ಶ್ರೀಕಾಂತ್‌ ಹೇಳಿದರು.

ತಂಡ 6 ಬ್ಯಾಟ್ಸ್‌ಮನ್‌ಗಳು, ನಾಲ್ಕು ವೇಗಿಗಳು, ಮೂವರು ಸ್ಪಿನ್ನರ್‌ಗಳು ಹಾಗೂ ಯುಸುಫ್ ಪಠಾಣ್‌ ರೂಪದಲ್ಲಿ ಓರ್ವ ಆಲ್‌ರೌಂಡರ್‌ ಮತ್ತು ನಾಯಕ ಧೋನಿ ರೂಪದಲ್ಲಿ ಏಕೈಕ ವಿಕೆಟ್‌ ಕೀಪರ್‌ನನ್ನು ಹೊಂದಿದೆ.

ಬಹುತೇಕ ಬ್ಯಾಟ್ಸ್‌ಮನ್‌ಗಳ ಆಯ್ಕೆ ನಿಶ್ಚಿತವಾಗಿತ್ತು. ಒಂದೇ ಚಿಂತೆಯೆಂದರೆ ತೆಂಡುಲ್ಕರ್‌, ಸೆಹವಾಗ್‌, ಗಂಭೀರ್‌ ಗಾಯದ ಚೇತರಿಕೆ ಕುರಿತದ್ದಾಗಿತ್ತು.

ವೇಗದ ಜಹೀರ್‌ ಪಡೆ

ವೇಗದ ಬೌಲಿಂಗ್‌ ಪಡೆಗೆ ಜಹೀರ್‌ ಖಾನ್‌ ಮುಂದಾಳತ್ವವಿದೆ. ಮುನಾಫ್ ಪಟೇಲ್‌, ಪ್ರವೀಣ್‌ ಕುಮಾರ್‌ ಮತ್ತು ಆಶಿಷ್‌ ನೆಹ್ರಾ ಉಳಿದ ಮೂವರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಶ್ರೀಶಾಂತ್‌ ಆಯ್ಕೆಗಾರರ ಒಲವು ಸಂಪಾದಿಸಲು ವಿಫ‌ಲರಾದರು. ಆ ದೃಷ್ಟಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪರದಾಡುತ್ತಿರುವ ಆಶಿಷ್‌ ನೆಹ್ರಾ ಅಚ್ಚರಿ ಆಯ್ಕೆಯೇ ಸರಿ.

ವಿನಯ್‌ ಕುಮಾರ್‌ಗೆ ಜಾಗವಿಲ್ಲ

ಕರ್ನಾಟಕದ ವೇಗಿ ವಿನಯ್‌ ಕುಮಾರ್‌ ಅವರನ್ನು ಸಂಭಾವ್ಯ ತಂಡದಲ್ಲಿ ಆಯ್ಕೆಗಾರರು ಸಂಖ್ಯೆ ಭರ್ತಿಗಷ್ಟೇ ಸೇರಿಸಿಕೊಂಡಂತಿತ್ತು. ಅವರನ್ನು ಅಂತಿಮ ತಂಡಕ್ಕೆ ಆಯ್ಕೆ ಮಾಡುವ ಉದ್ದೇಶವಾಗಲೀ, ಅದಕ್ಕೆ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವಕಾಶ ಮಾಡಿಕೊಡುವ ಇಚ್ಛೆಯಾಗಲೀ ಆಯ್ಕೆಗಾರರಿಗೆ ಇದ್ದಂತಿರಲಿಲ್ಲ.

ಇಶಾಂತ್‌ ಶರ್ಮ, ಮುರಳಿ ವಿಜಯ್‌, ರವೀಂದ್ರ ಜಡೇಜಾ, ಅಮಿತ್‌ ಮಿಶ್ರಾ, ಚೇತೇಶ್ವರ್‌ ಪೂಜಾರ ಆಯ್ಕೆಯಾಗದ ಕೆಲವು ಆಟಗಾರರು.

ವಿಶ್ವಕಪ್‌ನಲ್ಲಿ ಭಾರತ ’ಬಿ’ ಗುಂಪಿನಲ್ಲಿದ್ದು ಬಾಂಗ್ಲಾದೇಶ, ಇಂಗ್ಲಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಅಯರ್ಲಂಡ್‌ ಮತ್ತು ಹಾಲಂಡ್‌ ವಿರುದ್ಧ ಸೆಣಸಲಿದೆ.

ಭಾರತ ಫೆಬ್ರವರಿ 19ರಂದು ಢಾಕಾದಲ್ಲಿ ನಡೆಯುವ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಕನ್ನಡಿಗರಿಲ್ಲದ ತಂಡ

ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಸಲ ಕನ್ನಡಿಗರಿಲ್ಲದ ತಂಡವೊಂದು ಭಾರತವನ್ನು ಪ್ರತಿನಿಧಿಸುತ್ತಿರುವುದು ಕರ್ನಾಟಕದ ಅಭಿಮಾನಿಗಳ ಪಾಲಿಗೆ ಭಾರೀ ನಿರಾಸೆಯುಂಟುಮಾಡಿದೆ. ಸಂಭಾವ್ಯ ಆಟಗಾರರ ಯಾದಿಯಲ್ಲಿದ್ದ ರಾಜ್ಯದ ಏಕೈಕ ಪ್ರತಿನಿಧಿ ಆರ್‌. ವಿನಯ್‌ ಕುಮಾರ್‌ ಅವರನ್ನು ಕಡೆಗಣಿಸುವುದರೊಂದಿಗೆ ಕನ್ನಡಿಗರ ಕಟ್ಟಕಡೆಯ ನಿರೀಕ್ಷೆ ಕೂಡ ಮಣ್ಣುಪಾಲಾಯಿತು.

 

 

IND3

 

ಕನಸಿನ ತಂಡದ ಪೂರ್ವಾಪರ

 

ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡುವ ಮೂಲಕ ಆಯ್ಕೆಗಾರರು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇನ್ನೇನಿದ್ದರೂ ಟ್ರೋಫಿ ಗೆಲ್ಲುವುದು ಆಟಗಾರರ ಹೊಣೆ. ಈ ತಂಡದ ಸಮತೋಲನ, ಬಲಾಬಲ ಹೇಗಿದೆ? ಒಂದು ಅವಲೋಕನ ಇಲ್ಲಿದೆ...

* ವೀರೇಂದ್ರ ಸೆಹವಾಗ್‌ (ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌, ಆಫ್ಸ್ಪಿನ್ನರ್‌)

ವಿಧ್ವಂಸಕ ಬ್ಯಾಟ್ಸ್‌ಮನ್‌. ಸದ್ಯ ಉನ್ನತ ಫಾರ್ಮ್ನಲ್ಲಿಲ್ಲ. ಗಾಯದ ಸಮಸ್ಯೆಯೂ ಇದೆ. ಭಾರತದ ಸಾಧನೆಯಲ್ಲಿ ಇವರ ಪಾತ್ರ ನಿರ್ಣಾಯಕ. ಪಂದ್ಯ-228; ರನ್‌-7380; ಗರಿಷ್ಠ-146, ಸರಾಸರಿ-34.64; ಸ್ಟ್ರೈಕ್‌ರೇಟ್‌-103.27; ಶತಕ-13.

* ಗೌತಮ್‌ ಗಂಭೀರ್‌ (ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌)

ಆಕ್ರಮಣಶೀಲ ಬ್ಯಾಟ್ಸ್‌ಮನ್‌. ಉತ್ತಮ ಫಾರ್ಮ್ನಲ್ಲಿದ್ದಾರೆ. ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ಇದೇ ಮೊದಲ ವಿಶ್ವಕಪ್‌ ಅನುಭವ. ಪಂದ್ಯ-105; ರನ್‌-3680; ಗರಿಷ್ಠ-ಅಜೇಯ150; ಸರಾಸರಿ-40.43; ಸ್ಟ್ರೈಕ್‌ ರೇಟ್‌-86.52; ಶತಕ-9.

* ಸಚಿನ್‌ ತೆಂಡುಲ್ಕರ್‌ (ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌, ಪಾರ್ಟ್‌ಟೈಮ್‌ ಸ್ಪಿನ್ನರ್‌)

ದಾಖಲೆ 6ನೇ ವಿಶ್ವಕಪ್‌ನಲ್ಲಿ ಆಡಲಿರುವ ಇವರು, ಈವರೆಗೆ ಮರೀಚಿಕೆಯಾಗಿರುವ ಟ್ರೋಫಿಗಾಗಿ ಹಂಬಲಿಸುತ್ತಿದ್ದಾರೆ. ಅಮೋಘ ಫಾರ್ಮ್ನಲ್ಲೂ ಇದ್ದಾರೆ. ಪಂದ್ಯ-444; ರನ್‌-17629; ಗರಿಷ್ಠ-ಅಜೇಯ 200; ಸರಾಸರಿ-44.97; ಸ್ಟ್ರೈಕ್‌ರೇಟ್‌-86.18; ಶತಕ-46.

* ಯುವರಾಜ್‌ ಸಿಂಗ್‌ (ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌, ಸ್ಪಿನ್ನರ್‌)

ದಿಟ್ಟ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌. ಸಿದ್ಧ ಸಾಧಕ. ಪಂದ್ಯ ಮುಗಿಸುವ ನಿಷ್ಣಾತಿ ಇದೆ. ಹಾಲಿ ಫಾರ್ಮ್ ಮಾತ್ರ ಕಳವಳಕಾರಿ. ಪಂದ್ಯ-262; ರನ್‌-7653; ಗರಿಷ್ಠ-139; ಸರಾಸರಿ-36.97; ಸ್ಟ್ರೈಕ್‌ರೇಟ್‌-87.85; ಶತಕ-12.

* ಸುರೇಶ್‌ ರೈನಾ (ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌, ಸ್ಪಿನ್ನರ್‌)

ಆಕ್ರಮಣಶೀಲ ಬ್ಯಾಟ್ಸ್‌ಮನ್‌. ಶಾರ್ಟ್‌ಬಾಲ್‌ಗ‌ಳ ವಿರುದ್ಧ ಪರದಾಡುತ್ತಾರೆ. ಭಾರತೀಯ ಪಿಚ್‌ಗಳಲ್ಲಿ ಅಂಥ ಸಮಸ್ಯೆ ಏನಿಲ್ಲ. ನಾಯಕನ ಬೆಂಬಲ ಹೊಂದಿದ್ದಾರೆ. ಪಂದ್ಯ-108; ರನ್‌-2571; ಗರಿಷ್ಠ-ಅಜೇಯ 116, ಸರಾಸರಿ-35.70; ಸ್ಟ್ರೈಕ್‌ರೇಟ್‌-90.08; ಶತಕ-3.

* ವಿರಾಟ್‌ ಕೊಹ್ಲಿ (ಬಲಗೈ ಬ್ಯಾಟ್ಸ್‌ಮನ್‌)

ಭರವಸೆಯ ಬ್ಯಾಟ್ಸ್‌ಮನ್‌. ಶಾಂತ, ಸಮಗ್ರ ಹಾಗೂ ಆತ್ಮವಿಶ್ವಾಸ ಉಳ್ಳವರು. ಗಟ್ಟಿ ರಕ್ಷಣಾ ಶೈಲಿ ಹೊಂದಿದ್ದಾರೆ. ದೊಡ್ಡ ಹೊಡೆತಗಳಲ್ಲೂ ಸಿದ್ಧಹಸ್ತರು. ಪಂದ್ಯ-42; ರನ್‌-1555; ಗರಿಷ್ಠ-118; ಸರಾಸರಿ-45.73; ಸ್ಟ್ರೈಕ್‌ರೇಟ್‌-81.97; ಶತಕ-4.

* ಯೂಸುಫ್ ಪಠಾಣ್‌ (ಬಲಗೈ ಬ್ಯಾಟ್ಸ್‌ಮನ್‌, ಆಫ್ಸ್ಪಿನ್ನರ್‌)

ಏಕಾಂಗಿಯಾಗಿ ಪಂದ್ಯದ ದಿಕ್ಕುದೆಸೆ ಬದಲಿಸಬಲ್ಲ ಸಾಮರ್ಥ್ಯವುಳ್ಳವರು. ಜೊತೆಯಾಟ ಮುರಿಯಬಲ್ಲ ಉಪಯುಕ್ತ ಬೌಲರ್‌ ಸಹ ಹೌದು. ಧೋನಿ ಅವರನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆನ್ನುವುದು ನಿರ್ಣಾಯಕ. ಬ್ಯಾಟಿಂಗ್‌: ಪಂದ್ಯ-42; ರನ್‌-528; ಗರಿಷ್ಠ-ಅಜೇಯ 123; ಸರಾಸರಿ-29.33; ಸ್ಟ್ರೈಕ್‌ರೇಟ್‌-110; ಶತಕ-1; ವಿಕೆಟ್‌-29; ಅತ್ಯುತ್ತಮ-49ಕ್ಕೆ3.

* ಜಹೀರ್‌ ಖಾನ್‌ (ಎಡಗೈ ಮಧ್ಯಮವೇಗಿ)

ಪ್ರಧಾನ ವೇಗಿ. ವೈವಿಧ್ಯತೆ, ಅನುಭವ ಹಾಗೂ ಆರಂಭದಲ್ಲೇ ವಿಕೆಟ್‌ ಕಬಳಿಸುವ ನಿಪುಣತೆ ಎಲ್ಲವೂ ಇದೆ. ಪಂದ್ಯ-179; ವಿಕೆಟ್‌-247; ಅತ್ಯುತ್ತಮ-42ಕ್ಕೆ 5; ಸರಾಸರಿ-29.69.

* ಮುನಾಫ್ ಪಟೇಲ್‌ (ಬಲಗೈ ಮಧ್ಯಮ ವೇಗಿ)

ಲೈನ್‌ ಮತ್ತು ಲೆಂಗ್‌¤ನ ಉತ್ತಮ ಮಿಶ್ರಣವಿದೆ. ಆದರೆ ಸ್ಥಿರತೆಯದೇ ಕೊರತೆ. ಜೊತೆಗೆ ಆಲಸಿ ಎಂಬ ಆರೋಪವಿದೆ. ಪಂದ್ಯ-51; ವಿಕೆಟ್‌-60; ಅತ್ಯುತ್ತಮ-29ಕ್ಕೆ 4; ಸರಾಸರಿ-29.81.

* ಪ್ರವೀಣ್‌ ಕುಮಾರ್‌ (ಬಲಗೈ ಮಧ್ಯಮ ವೇಗಿ)

ನಾಯಕ ನೆಚ್ಚಿನ ಬೌಲರ್‌. ಪರಿಶ್ರಮಿ. ಚೆಂಡು ಹೊಸತಿರಲಿ, ಹಳತಿರಲಿ ಇವರ ಪ್ರದರ್ಶನ ವ್ಯತ್ಯಾಸವಾಗುವುದಿಲ್ಲ. ಉತ್ತಮ ಸ್ವಿಂಗ್‌ ಬೌಲರ್‌. ಪಂದ್ಯ-48; ವಿಕೆಟ್‌-57; ಅತ್ಯುತ್ತಮ-31ಕ್ಕೆ 4; ಸರಾಸರಿ-33.57.

* ಆಶಿಶ್‌ ನೆಹ್ರಾ (ಎಡಗೈ ಮಧ್ಯಮ ವೇಗಿ)

ಗಾಯಗಳ ದೊಡ್ಡ ಇತಿಹಾಸವೇ ಇದೆ. ಆದರೆ ಕೊನೆಯ ಓವರ್‌ಗಳಲ್ಲಿ ಉಪಯುಕ್ತ ಬೌಲರ್‌. ಪಂದ್ಯ-115; ವಿಕೆಟ್‌-153; ಅತ್ಯುತ್ತಮ-23ಕ್ಕೆ 6; ಸರಾಸರಿ-31.32.

* ಮಹೇಂದ್ರ ಸಿಂಗ್‌ ಧೋನಿ (ಬಲಗೈ ಬ್ಯಾಟ್ಸ್‌ಮನ್‌, ವಿಕೆಟ್‌ಕೀಪರ್‌)

ಯಶಸ್ವಿ ನಾಯಕನ ವೃತ್ತಿಜೀವನದಲ್ಲಿ ಅತೀ ದೊಡ್ಡ ಅಗ್ನಿಪರೀಕ್ಷೆ ಇದಾಗಲಿದೆ. ಕೆಳ ಕ್ರಮಾಂಕದಲ್ಲಿ ಪರಿಣಾಮಕಾರಿ ಆಟಗಾರ. ಸನ್ನಿವೇಶ ಬಯಸಿದರೆ, ಮೇಲಿನ ಕ್ರಮಾಂಕಕ್ಕೂ ಸೈ. ಒತ್ತಡದ ಸನ್ನಿವೇಶಗಳಲ್ಲಿ ನಂ.1. ಪಂದ್ಯ-174; ರನ್‌-5796; ಗರಿಷ್ಠ-ಅಜೇಯ 183, ಸರಾಸರಿ-49.96; ಸ್ಟ್ರೈಕ್‌ ರೇಟ್‌-88.01; ಶತಕ-7; ಕ್ಯಾಚ್‌-172; ಸ್ಟಂಪಿಂಗ್‌-55.

* ಹರ್ಭಜನ್‌ ಸಿಂರ್ಗ (ಬಲಗೈ ಆಫ್ಸ್ಪಿನ್ನರ್‌)

ತವರಿನ ವಾತಾವರಣದಲ್ಲಿ ಬ್ರಹ್ಮಾಸ್ತ್ರ. ಪಿಚ್‌ನಲ್ಲಿ ನೆಗೆತವಿದ್ದರೆ ಇನ್ನಷ್ಟು ವಿಧ್ವಂಸಕ. ಸೊ#àಟಕ ಬ್ಯಾಟ್ಸ್‌ಮನ್‌ ಸಹ ಹೌದು. ಪಂದ್ಯ-214; ವಿಕೆಟ್‌-244; ಅತ್ಯುತ್ತಮ-31ಕ್ಕೆ 5; ಸರಾಸರಿ-31.85.

* ಪೀಯೂಷ್‌ ಚಾವ್ಲಾ (ಬಲಗೈ ಲೆಗ್‌ಸ್ಪಿನ್ನರ್‌)

ನಾಯಕ ಧೋನಿ ಇವರ ಆಯ್ಕೆ ಬಯಸಿದ್ದರು. ತಂಡದಲ್ಲಿ ಏಕೈಕ ಲೆಗ್‌ಸ್ಪಿನ್ನರ್‌. ಪಂದ್ಯ-21; ವಿಕೆಟ್‌-28; ಅತ್ಯುತ್ತಮ-23ಕೆ R4; ಸರಾಸರಿ-35.32.

* ರವಿಚಂದ್ರನ್‌ ಅಶ್ವಿ‌ನ್‌ (ಆಫ್ಸ್ಪಿನ್ನರ್‌)

ಲಭ್ಯವಾದ ಎಲ್ಲಾ ಅವಕಾಶ ಸದುಪಯೋಗ ಪಡಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳನ್ನು ವಂಚಿಸುವ ಛಾತಿ ಇದೆ. ಉತ್ತಮ ಸ್ಪಿನ್ನರ್‌ಗಿರಬೇಕಾದ ಸೃಜನಶೀಲತೆ ಇದೆ. ಪಂದ್ಯ-7; ವಿಕೆಟ್‌-14; ಅತ್ಯುತ್ತಮ-24ಕ್ಕೆ 3; ಸರಾಸರಿ-23.21.

ಭಾರತದ ವಿಶ್ವಕಪ್‌ ತಂಡ
ಮಹೇಂದ್ರ ಸಿಂಗ್‌ ಧೋನಿ (ನಾಯಕ)
ವೀರೇಂದ್ರ ಸೆಹವಾಗ್‌ (ಉಪನಾಯಕ)
ಸಚಿನ್‌ ತೆಂಡುಲ್ಕರ್‌
ಗೌತಮ್‌ ಗಂಭೀರ್‌
ವಿರಾಟ್‌ ಕೊಹ್ಲಿ
ಯುವರಾಜ್‌ ಸಿಂಗ್‌
ಸುರೇಶ್‌ ರೈನಾ
ಯೂಸುಫ್ ಪಠಾಣ್‌
ಹರ್ಭಜನ್‌ ಸಿಂಗ್‌
ಜಹೀರ್‌ ಖಾನ್‌
ಆಶಿಷ್‌ ನೆಹ್ರಾ
ಪ್ರವೀಣ್‌ ಕುಮಾರ್‌
ಮುನಾಫ್ ಪಟೇಲ್‌
ಆರ್‌. ಅಶ್ವಿ‌ನ್‌
ಪೀಯೂಷ್‌ ಚಾವ್ಲಾ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi