ಬಂಟ್ವಾಳ ಕ್ಷೇತ್ರ:ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ನನ್ನ ಮೊದಲ ಆದ್ಯತೆ: ರಮಾನಾಥ ರೈ


jayaprakash kiniudupi
KNW, 10-05-2013 14:35:37


Write Comment     |     E-Mail To a Friend     |     Facebook     |     Twitter     |     Print


ಮಂಗಳೂರು:ಮೇ.10.ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಸೆಳೆಯಲ್ಪಟ್ಟು ಕಳೆದ 30 ವರ್ಷ ಗಳಿಂದ ಸೋಲಿಲ್ಲದ ಸರದಾರನಂತೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿರುವ ರಮಾನಾಥ ರೈ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕೋಮುವಾದಿ ರಾಜಕಾರಣ ವನ್ನು ದಿಟ್ಟತನದಿಂದ ಎದುರಿಸುತ್ತ ಬಂದವರು. ಇದೇ ಕಾರಣದಿಂದ ರಮಾನಾಥ ರೈಯವರನ್ನು ಸೋಲಿಸಲು ಪ್ರತಿ ಚುನಾವಣೆಯಲ್ಲೂ ನಾನಾ ರೀತಿ ಷಡ್ಯಂತ್ರಗಳನ್ನು ಹಣೆಯಲಾಗುತ್ತದೆ. ಆದರೆ ರಮಾನಾಥ ರೈ ಇದನ್ನೆಲ್ಲ ಮೀರಿ ಬೆಳೆಯುತ್ತಲೇ ಸಾಗಿದ್ದಾರೆ. ಕೋಮವಾದಿಗಳಿಗೆ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದಾರೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಿಸಿ ಆರು ಗೆಲುವುಗಳನ್ನು ಕಂಡಿರುವ ರಮಾನಾಥ ರೈ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ತನ್ನ ಗೆಲುವಿನ ಶ್ರೇಯವನ್ನು ಪಕ್ಷದ ಕಾರ್ಯಕರ್ತರಿಗೆ ಕೊಡುವ ರಮಾನಾಥ ರೈ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ಚುನಾವಣೆಯ ಪ್ರಚಾರ ಸಮಯದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ನೀವು ಗುರುತಿಸಿದ ಪ್ರಮುಖ ಸಮಸ್ಯೆ ಯಾವುದು?
ರೈ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಕುಡಿಯುವ ನೀರಿನದ್ದಾಗಿದೆ. ಇದು ಜಿಲ್ಲೆಯ ಸಮಸ್ಯೆಯೂ ಹೌದು. ಅಂತರ್ಜಲ ಕುಸಿಯುತ್ತಿದೆ. ಜಲಮೂಲ ಬತ್ತಿ ಹೋಗುತ್ತಿದೆ. ಇದರ ಪರಿಹಾರಕ್ಕಾಗಿ ನದಿ ಮೂಲದಿಂದ ನೀರೆತ್ತುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಇದು ಮುಂದಿನ ಬೇಸಿಗೆಯ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗುತ್ತದೆ. ನದಿಯಿಂದ ನೀರೆತ್ತಿ, ಶುದ್ಧೀಕರಿಸಿ ಗ್ರಾಮೀಣ ಪ್ರದೇಶಗಳ ಮನೆಮನೆಗಳಿಗೆ ತಲುಪಿಸಲಾಗುತ್ತದೆ.

ನದಿ ನೀರು ಬಳಸಿದರೆ ಕೃಷಿ ಚಟುವಟಿಕೆಗೆ ಅಡಚಣೆಯಾಗುವುದಿಲ್ಲವೇ?
ರೈ: ಕುಡಿಯುವ ಉದ್ದೇಶಕ್ಕಾಗಿ ನದಿಯಿಂದ ಎತ್ತುವ ನೀರಿನ ಪ್ರಮಾಣ ಹೆಚ್ಚಾಗಿರುವುದಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗು ವುದಿಲ್ಲ. ಕೃಷಿಗಾಗಿಯೇ ಪ್ರತ್ಯೇಕ ಯೋಜನೆಗಳು ಇವೆ. ಶುದ್ಧೀಕರಿಸಿದ ನೀರು ಕೃಷಿಗೆ ಬಳಕೆಯಾಗ ದಂತೆ ನಾಗರಿಕರು ಎಚ್ಚರ ವಹಿಸಬೇಕಾಗುತ್ತದೆ ಎಂಬುದನ್ನು ನಾನು ಇದೇ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ.

ಸರಕಾರಿ ಜಮೀನು ಅತಿಕ್ರಮಿಸಿ ಮನೆ ಕಟ್ಟಿರುವವರಿಗೆ ಹಕ್ಕು ಪತ್ರ ನೀಡುವ ವಿಷಯದಲ್ಲಿ ನಿಮ್ಮ ಕಾರ್ಯಕ್ರಮ ಏನು?
ರೈ: ಕಳೆದ ಏಳೆಂಟು ವರ್ಷಗಳಿಂದ ರಾಜ್ಯಾದ್ಯಂತ ಬಡವರಿಗೆ ನಿವೇಶನ ಹಂಚುವ ಮತ್ತು ಮನೆ ಒದಗಿಸುವ ಕಾರ್ಯ ಆಗಿಲ್ಲ. ಆದುರಿಂದ ಬಡವರು ಸರಕಾರಿ ಭೂಮಿಯನ್ನು ಅತಿಕ್ರಮಿಸುವಂತಾಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರಕಾರಿ ಭೂಮಿ ಅತಿಕ್ರಮಿಸಿ ಮನೆ ಕಟ್ಟಿದವರಿಗೆ ಹಕ್ಕು ಪತ್ರ ನೀಡುವ ಕಾಯ್ದೆ ರೂಪಿಸಲಾಗಿತ್ತು. ಬಿಜೆಪಿ ಆಡಳಿತಗಾರರು ಫಲಾನುಭವಿಗಳಿಂದ ಇದಕ್ಕೆ ಅರ್ಜಿಯನ್ನೇ ಪಡೆದಿಲ್ಲ. ಈಗ ಕಾಂಗ್ರೆಸ್ ಸರಕಾರ ರಚಿಸಲಿದೆ. ಆಗ ಹಕ್ಕು ಪತ್ರ ವಿತರಣೆ, ನಿವೇಶನ ಹಂಚಿಕೆಗೆ ಒತ್ತಡ ಹೇರುತ್ತೇನೆ.

ಯುವಕರಿಗಾಗಿ ಹಾಕಿಕೊಂಡಿ ರುವ ಕಾರ್ಯಕ್ರಮ ಏನು?
ರೈ: ಬೆಂಜಿನಪದವಿನಲ್ಲಿ ಅಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಮಟ್ಟದ ಕ್ರೀಡಾಂಗಣ ರೂಪಿಸಲಾಗುತ್ತಿದೆ. ಅದಕ್ಕಾಗಿ ಜಮೀನು ಸ್ವಾಧೀನಪಡಿಸಲಾಗಿದೆ. ಉದ್ಯೋಗ ವಕಾಶ ಹೆಚ್ಚಿಸಲು ಕೈಗಾರಿಕೆ ಬರಲೇಬೇಕು. ಪರಿಸರಕ್ಕೆ ಮಾರಕ ಆಗದಂತಹ ಕೈಗಾರಿಕೆಗಳನ್ನು ತರಲು ಪ್ರಯತ್ನಿಸುತ್ತೇನೆ.

ಬಂಟ್ವಾಳ ಕ್ಷೇತ್ರದ ದಲಿತರ ಕಾಲನಿಗಳಿಗೆ ಇನ್ನೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಚುನಾವಣೆಯಲ್ಲಿ ನಿಮ್ಮೆದುರು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಮಾಡಿರುವ ಆರೋಪಕ್ಕೆ ಏನೆನ್ನುತ್ತೀರಿ?
ರೈ: ಅವರು ಈ ಕ್ಷೇತ್ರಕ್ಕೆ ಹೊಸಬರು. 20 ವರ್ಷಗಳ ಹಿಂದೆ ನೋಡಿದ್ದನ್ನು ಈಗ ಹೇಳುತ್ತಿ ದ್ದಾರೆ. ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದೀ ಕರಣ ಯೋಜನೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 120 ಕೋಟಿ ರೂ. ವಿದ್ಯುತ್ ಸೌಲಭ್ಯ ಒದಗಿಸುವ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಜೋಡಣೆಯ ಕಾರ್ಯ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ವಿದ್ಯುತ್ ಇಲ್ಲದ ಗ್ರಾಮೀಣ ಪ್ರದೇಶ ಕಾಣಲಾರದು. ದಲಿತರನ್ನು ಕಾಂಗ್ರೆಸ್‌ನ ಓಟ್ ಬ್ಯಾಂಕ್ ಎಂದು ಹೇಳುತ್ತಾರೆ. ಇದನ್ನು ನಾವು ಕೂಡ ಒಪ್ಪಿಕೊಳ್ಳುತ್ತೇವೆ. ದಲಿತರಿಗೆ ಮೀಸಲಾತಿ ಒದಗಿಸಿದ್ದೇ ಕಾಂಗ್ರೆಸ್. ಅವರಿಗೆ ಶಕ್ತಿ ತುಂಬುವ ಯೋಜನೆಗಳನ್ನು ಜಾರಿಗೆ ತಂದಿದ್ದು ಕೂಡ ಕಾಂಗ್ರೆಸ್. ತಮಗೆ ಸಹಾಯ ಮಾಡಿದ ಪಕ್ಷವನ್ನು ಅವರು ಬೆಂಬಲಿಸುತ್ತಾರೆ. ಪ್ರಭಾವಿ ಸಮಾಜ ದವರು ಬಿಜೆಪಿಯ ಫಲಾನುಭವಿಗಳಾಗಿರು ವುದರಿಂದ ಅವರು ಬಿಜೆಪಿಯ ಓಟ್ ಬ್ಯಾಂಕ್ ಆಗಿದ್ದಾರೆ. ಗ್ರಾಮ ಪಂಚಾಯತ್‌ಗಳಲ್ಲಿ ದುರ್ಬಲ ವರ್ಗದವರು ಅಧ್ಯಕ್ಷರಾಗುವಂತಾಗಿದ್ದು, ಕಾಂಗ್ರೆಸ್ ಜಾರಿಗೆ ತಂದ ಮೀಸಲಾತಿಯಿಂದ ಎಂಬುದನ್ನು ಮರೆಯಲಾದೀತೆ. ಬಿಜೆಪಿಯ ರಾಮಾ ಜೋಯಿಷ್ ಈ ಮೀಸಲಾತಿ ರದ್ದು ಪಡಿಸಲು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಈ ದಾವೆ ಹಿಂಪಡೆಯಲು ಪ್ರಯತ್ನಿಸುತ್ತಿದ್ದರು ಎಂಬುದು ಗಮನಿಸಬೇಕಾದ ಅಂಶ.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಇರುವುದು ಪಕ್ಷಗಳ ನಡುವೆ ಅಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ರಮಾನಾಥ ರೈ ನಡುವೆ ಎಂದು ಹೇಳಿದ್ದರ ಹಿಂದಿನ ಮರ್ಮ ಏನು ?
ರೈ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ವ್ಯಕ್ತಿಗಳು ಸಂಘಪರಿವಾರದ ಗುಪ್ತ ಕಾರ್ಯ ಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ನಾನು ಇದಕ್ಕೆ ಆಸ್ಪದ ನೀಡಿಲ್ಲ. ಇದೇ ಕಾರಣದಿಂದ ನನ್ನನ್ನು ಚುನಾವಣೆಗಳಲ್ಲಿ ಸೋಲಿಸಲು ಪ್ರಯತ್ನಿಸುತ್ತ ಬಂದಿದ್ದಾರೆ. ಬಿಜೆಪಿ ಸರಕಾರದ ಆಡಳಿತಗಾರರು ಕಲ್ಲಡ್ಕ ಪ್ರಭಾಕರ ಭಟ್ಟರ ಮಾತು ಕೇಳುತ್ತಿದ್ದರು. ಆದುದರಿಂದಲೇ ಪ್ರಮುಖ ಅಧಿಕಾರ ಸ್ಥಾನಗಳು (ಬಾಲಭವನದ ಅಧ್ಯಕ್ಷ, ಎರಡು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಕೆಪಿಎಸ್ ಸದಸ್ಯ ಇನ್ನೂ ಅನೇಕ) ಬಂಟ್ವಾಳದವರಿಗೆ ಕೊಟ್ಟಿದ್ದಾರೆ. ಇದು ನನ್ನನ್ನು ಸೋಲಿಸಲು ಕೆಲವರಿಗೆ ನೀಡಿದ ಅಧಿಕಾರ ವಾಗಿತ್ತು. ನನ್ನ ವಿರುದ್ಧ ಹಣವಂತ ವ್ಯಕ್ತಿಯನ್ನು ಕಣಕ್ಕಿಳಿಸಿದರು. ಇಲ್ಲಿಯ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸಲು ಕಲ್ಲಡ್ಕ ಪ್ರಭಾಕರ ಭಟ್ಟರು ಪ್ರಯತ್ನಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿತ್ತು. ಇದೇ ಕಾರಣದಿಂದ ಸ್ಪರ್ಧೆ ಇರುವುದು ನನ್ನ ಹಾಗೂ ಪ್ರಭಾಕರ ಭಟ್ಟರ ನಡುವೆ ಎಂದು ಮತದಾರರನ್ನು ಎಚ್ಚರಿಸಿದ್ದೆ. ಸಾಮಾಜಿಕ ಸಾಮರಸ್ಯವೇ ನನ್ನ ಆದ್ಯತೆ.

ಅಲ್ಪಸಂಖ್ಯಾತ ಮತಗಳನ್ನು ಹಿಡಿದಿಟ್ಟುಕೊಳ್ಳುವ ದಿಸೆಯಲ್ಲಿ ನಿಮ್ಮ ಕಾರ್ಯ ತಂತ್ರ ಏನು?

ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಬಿಜೆಪಿಯವರು ಕಾರ್ಯತಂತ್ರ ರೂಪಿಸುತ್ತಿ ದ್ದಾರೆ. ಅಲ್ಪಸಂಖ್ಯಾತರನ್ನು ಪ್ರತ್ಯೇಕವಾಗಿಸಲು ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಈ ಜಿಲ್ಲೆಯ ಅಲ್ಪಸಂಖ್ಯಾತ ಮತದಾರರು ಬುದ್ಧಿ ವಂತರು ಅವರು ಕೋಮುವಾದಿಗಳನ್ನು ಸೋಲಿ ಸುವ ಪಕ್ಷಕ್ಕೆ ಮತ್ತು ಜಾತ್ಯತೀತ ನಿಲುವಿನ ಗೆಲ್ಲುವ ಅಭ್ಯರ್ಥಿಗೆ ಮತ ಹಾಕುತ್ತಾರೆ. ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ನಿಂತಿದ್ದನ್ನೇ ಅಪಪ್ರಚಾರ ಮಾಡಿ ನನ್ನನ್ನು ಸೋಲಿಸಲಾಗಿತ್ತು. ಆದರು ನಾನು ಎದೆಗುಂದದೆ ನನ್ನ ಕಾರ್ಯ ಮುಂದುವರಿಸಿದ್ದಕ್ಕೆ ಪ್ರತಿಯಾಗಿ ಭಾವನೆಗಳಿಗೆ ಬಲಿ ಬೀಳದೆ ಅಲ್ಪ ಸಂಖ್ಯಾತರು ಕಾಂಗ್ರೆಸ್ ಪರ ಮತ ಚಲಾಯಿಸಿ ದ್ದಾರೆ. ಅವರ ಹಿತ ರಕ್ಷಣೆ ನನ್ನ ಹೊಣೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸುತ್ತೇನೆ.

ಮುಂದಿನ ದಿನಗಳಲ್ಲಿ ರಚನೆಯಾಗುವ ಕಾಂಗ್ರೆಸ್ ಸರಕಾರದಲ್ಲಿ ಯಾವ ಸ್ಥಾನ ನಿಭಾಯಿಸಲು ಬಯಸುತ್ತೀರಿ?
ರೈ: ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ವರಿಷ್ಠರ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ. ಪಕ್ಷ ವಹಿಸುವ ಯಾವ ಜವಾಬ್ದಾರಿಯನ್ನೂ ನಿಭಾಯಿಸಲು ಸಿದ್ಧನಾಗಿದ್ದೇನೆ. ಕಾಂಗ್ರೆಸ್ ನನ್ನ ಧರ್ಮ. ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಹಿಂಜರಿಯುವುದಿಲ್ಲ.

ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನೀವು ಮುಂದಿನ ದಿನಗಳಲ್ಲಿ ನಿಮ್ಮ ರಾಜಕೀಯ ನಿರ್ಧಾರ ಏನು?
ರೈ: ನನಗೆ ಶಾಸಕನಾಗಿ ಜನರ ಸೇವೆ ಮಾಡುವ ವಯಸ್ಸೂ ಇದೆ. ಆರೋಗ್ಯವೂ ಇದೆ. ಕಿರಿಯ ವಯಸ್ಸಿನಲ್ಲಿ ಶಾಸಕನಾಗಿದ್ದು ನನ್ನ ತಪ್ಪಲ್ಲ. ಮೊದಲ ಬಾರಿ ಸ್ಪರ್ಧಿಸುತ್ತಿರುವವರು ನನಗಿಂತ ಹಿರಿಯರಾಗಿದ್ದಾರೆ. ಸೋತವರು ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ಗೆದ್ದವರು ಬದಲಾಗುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವನ್ನೂ ಬದಲಾಯಿಸುವುದಿಲ್ಲ. ನಾನು ವಿಧಾನಸಭೆ ಚುನಾವಣೆ ಯಿಂದ ಹಿಂದೆ ಸರಿಯಬೇಕು ಎಂದು ಹೇಳುವವರ ವೌಢ್ಯತನದ ಬಗ್ಗೆ ಖೇದ ಇದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi