ಹೆಗ್ಗಡೆ ತೇಜೋವಧೆ ಯತ್ನ - ಮುಖ್ಯಮಂತ್ರಿ ಗಮನಕ್ಕೆ


Udayavani, 21-10-2013 06:28:38


Write Comment     |     E-Mail To a Friend     |     Facebook     |     Twitter     |     Print


ಮಾಧ್ಯಮ ಸುಸಂಸ್ಕೃತರನ್ನು ಕಾಪಾಡಬೇಕು

ಧರ್ಮ, ಮುಖಂಡರ ಬಗ್ಗೆ ಆರೋಪ ಕೆಟ್ಟ ಬೆಳವಣಿಗೆ

ಸರಕಾರ ಈ ಪ್ರಕರಣದ ತನಿಖೆ ಚುರುಕುಗೊಳಿಸಬೇಕು

ಕೀಳು ಮಟ್ಟದ ಪ್ರಚಾರದ ಬಗ್ಗೆ ಎಚ್ಚರಿಕೆ ಅಗತ್ಯ

ಮೂಡಬಿದಿರೆ: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಯತ್ನ ನಡೆಯುತ್ತಿರುವುದು ತೀರಾ ಕಳವಳಕಾರಿ. ಇದರ ಹಿಂದಿರುವವರಿಗೆ ಮತ್ತು ಪ್ರಕರಣದ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಸಚಿವ ಅಭಯಚಂದ್ರ ಹೇಳಿದರು.

ತಥಾಕಥಿತ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಅವರ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ವಿದ್ಯಮಾನದ ವಿರುದ್ಧ ಮೂಡುಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ರವಿವಾರ ನಡೆದ ಸಾರ್ವಜನಿಕರು ಮತ್ತು ಸಂಘ - ಸಂಸ್ಥೆಗಳ ಬೃಹತ್‌ ಪ್ರತಿಭಟನ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಮಾಧ್ಯಮ ಸುಸಂಸ್ಕೃತರನ್ನು ಕಾಪಾಡಬೇಕು:

ಶ್ರೀ ಜೈನ ಮಠದ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮಸ್ಥಳ ಪ್ರಾಮಾಣಿಕತೆ, ಸತ್ಯ, ಧರ್ಮ ಸಾಮರಸ್ಯ ಮತ್ತು ಸಾಂತ್ವನಕ್ಕೆ ಹೆಸರಾದ ಕ್ಷೇತ್ರ. ಡಾ| ಹೆಗ್ಗಡೆ ಅವರದ್ದು ಹೂವಿನ ಮನಸ್ಸು. ಮಾಧ್ಯಮ ಸುಸಂಸ್ಕೃತರನ್ನು ಕಾಪಾಡುವ ಕೆಲಸ ಮಾಡಬೇಕು. ಸತ್ಯದ ತೇಜೋವಧೆ ಮಾಡಬಾರದು ಎಂದರು.

ಜನರ ನಂಬಿಕೆಯೊಂದಿಗೆ ಚೆಲ್ಲಾಟ ಸಲ್ಲ: ಅಬು ಸೂಫಿಯಾನ್‌

ಬಜಪೆಯ ಇಸ್ಲಾಂ ಧರ್ಮಗುರು ಅಬು ಸೂಫಿಯಾನ್‌ ಮಾತನಾಡಿ, ಧರ್ಮ ಮತ್ತು ಧಾರ್ಮಿಕ ಮುಖಂಡರ ಬಗ್ಗೆ ಆರೋಪದ ಮಾತುಗಳನ್ನಾಡುವ ಕೆಟ್ಟ ಬೆಳವಣಿಗೆ ಅತಿಯಾಗುತ್ತಿದೆ. ಅನಗತ್ಯ ಆರೋಪದ ಮಾತುಗಳನ್ನಾಡಿ ಜನರ ನಂಬಿಕೆಯೊಂದಿಗೆ ಚೆಲ್ಲಾಟವಾಡುವ, ಕೀಳು ಮಟ್ಟದ ಪ್ರಚಾರದ ಬಗ್ಗೆ ನಾವು ಎಚ್ಚರವಹಿಸಬೇಕು. ಯಾವುದೇ ಕ್ಷೇತ್ರದ ಪಾವಿತ್ರÂಕ್ಕೆ ಕಳಂಕ ತರುವ ಇಂತಹ ಕೃತ್ಯ ಖಂಡನೀಯ ಎಂದರು.

ಸಾರ್ವಜನಿಕರನ್ನು ಕೆರಳಿಸುವ ಅಗತ್ಯ ಏನಿದೆ

ಮಣಿಪಾಲ ಮತ್ತು ಹೊಸದಿಲ್ಲಿ ಪ್ರಕರಣಗಳಲ್ಲಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ಪೊಲೀಸ್‌ ಇಲಾಖೆಯೇ ಕೆಲಸ ಮಾಡಿತ್ತು. ರಾಜಕೀಯದ ಘಟನಾನುಘಟಿಗಳನ್ನೇ ತನಿಖೆಯ ಆಧಾರದಲ್ಲಿ ಜೈಲಿಗೆ ತಳ್ಳುವಲ್ಲಿ ನಮ್ಮ ತನಿಖಾ ಸಂಸ್ಥೆಗಳು ಯಶಸ್ಸು ಕಂಡಿರುವಾಗ ನಾವೇ ಸಾರ್ವಜನಿಕರನ್ನು ಕೆರಳಿಸುವ ಅನಧಿಕೃತ ತನಿಖಾಧಿಧಿಕಾರಿಗಳಾಗುವ ಅಗತ್ಯ ಏನಿದೆ ಎಂದು ಅವರು ಪ್ರಶ್ನಿಸಿದರು.

ಪ್ರಸ್ತಾವನೆಗೈದ ಡಾ| ಎಂ. ಮೋಹನ ಆಳ್ವ, ಶಿಕ್ಷಣ, ಆರೋಗ್ಯ, ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಡಾ| ಹೆಗ್ಗಡೆ ಅವರ ಕೊಡುಗೆ ಜಾಗತಿಕ ಮಾದರಿಯಾಗಿದೆ. ಅವರು ವಿಶ್ವ ಕುಟುಂಬಕ್ಕೆ ಸೇರಿದ್ದು, ಅವರ ಮನೆ ಎಲ್ಲರಿಗೂ ಮಹಾಮನೆ. ಅವರ ದುಃಖ ನಮ್ಮ ದುಃಖ ಎಂದು ಎದುರಿಸಬೇಕಾಗಿದೆ. ಸರಕಾರ ಈ ಪ್ರಕರಣದಿಂದ ತತ್‌ಕ್ಷಣ ಎಚ್ಚೆತ್ತು ತನಿಖೆ ಚುರುಕಾಗಿ ನಡೆಯುವಂತೆ ಒತ್ತಡ ಹಾಕಿ ಅಪರಾಧಿಧಿಗಳನ್ನು ಪತ್ತೆ ಹಚ್ಚಿ ಖಾವಂದರಿಗೆ ನ್ಯಾಯ ಕೊಡಬೇಕು. ಸೌಜನ್ಯಾಳ ಕುಟುಂಬದ ನೋವು ನಮಗೆ ಅರ್ಥವಾಗುತ್ತದೆ. ಸತ್ಯ ಎಂದಿಗೂ ಬಹಿರಂಗವಾಗುವಂಥದ್ದೇ. ದೃಶ್ಯ ಮಾಧ್ಯಮದಲ್ಲಿ ಅಂತೆ - ಕಂತೆಗಳಿಗೆ ಅವಕಾಶ ಕಲ್ಪಿಸಿ ವೈಭವೀಕರಣ ಮಾಡಲಾಗಿದೆ. ಇದು ಆಘಾತಕಾರಿ ಎಂದರು.

ಸಿಬಿಐ ತನಿಖೆಯಾಗಲಿ: ಅಮರನಾಥ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಅಭಿವೃದ್ಧಿ ಹರಿಕಾರ ಹೆಗ್ಗಡೆ ಅವರದ್ದು ನಿಷ್ಕಳಂಕ ವ್ಯಕ್ತಿತ್ವ. ಮಾಧ್ಯಮದವರು ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಪ್ರತಿಯಾಗಿ ಪ್ರಕರಣದ ಸತ್ಯಾಸತ್ಯತೆ ಅರಿತುಕೊಳ್ಳಬೇಕು. ತನಿಖೆಯಲ್ಲಿ ವಿಳಂಬವಾಗಿರುವುದೇ ಇಂತಹ ಅಪಪ್ರಚಾರಕ್ಕೆ ಅವಕಾಶ ನೀಡಿದೆ. ತನಿಖೆ ಶೀಘ್ರವಾಗಿ ನಡೆದು ನಿಜವಾದ ಆರೋಪಿಗಳ ಪತ್ತೆಯಾಗಬೇಕು. ಹೆಗ್ಗಡೆ ಅವರ ಮೇಲಿನ ಸುಳ್ಳು ಆರೋಪ ತೊಲಗಬೇಕು ಎಂದರು.

ಅನುಕೂಲಕ್ಕೆ ಬಳಸಿಕೊಳುÉತ್ತಿದ್ದಾರೆ

ಮಿಜಾರುಗುತ್ತು ಆನಂದ ಆಳ್ವ ಮಾತನಾಡಿ, ಡಾ| ಹೆಗ್ಗಡೆ ಅವರಿಗಾಗದ ಕೆಲವರು ಈ ಪ್ರಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಅಹಂಕಾರ ಇಲ್ಲದೆ ಸತ್ಯಕ್ಕೆ ಸರಿಯಾಗಿ ಜೀವನ ನಡೆಸಿದರೆ ಅದೇ ಪರಮ ಸುಖ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರ್ಪುಸ್‌ ಕ್ರಿಸ್ತಿ ಚರ್ಚ್‌ನ ರೆ. ಫಾ. ಆಸ್ಟಿನ್‌ ಪೀಟರ್‌ ಪೆರಿಸ್‌, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಧಿಕಾರಿ ಕೆ. ಶ್ರೀಪತಿ ಭಟ್‌, ಮಹಾವೀರ ಕಾಲೇಜು ಪ್ರಾಂಶುಪಾಲ ಪ್ರೊ| ಎಚ್‌.ಸಿ. ದೀಕ್ಷಿತ್‌, ಧವಲಾ ಕಾಲೇಜು ಪ್ರಾಂಶುಪಾಲ ರವೀಶ್‌ ಕುಮಾರ್‌, ಚೌಟರ ಅರಮನೆ ಕುಲದೀಪ್‌ ಎಂ., ಪುರಸಭಾ ಮಾಜಿ ಅಧ್ಯಕ್ಷ ಎಚ್‌. ಪ್ರೇಮಾನಂದ ಪ್ರಭು, ಪುರಸಭಾ ಸದಸ್ಯ ಪಿ.ಕೆ. ಥಾಮಸ್‌, ರೈತ ಮುಖಂಡ ಎಚ್‌. ಧನಕೀರ್ತಿ ಬಲಿಪ, ವಕೀಲ ಎಂ. ಬಾಹುಬಲಿ ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

ಶಿರ್ತಾಡಿ ಸಂಪತ್‌ ಡಿ. ಸಾಮ್ರಾಜ್ಯ ಅವರು ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸುವ ಮನವಿ ವಾಚಿಸಿದರು. ವಲಯ ಜನಜಾಗೃತಿ ಸಮಿತಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ. ಶೀನಪ್ಪ ವಂದಿಸಿದರು.

ಆಧಾರ್‌ ಕಾರ್ಡ್‌ ನೋಂದಣಿಗೆ ಅಪರ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದ. ಕ. ಜಿಲ್ಲೆಯ ಸುಳ್ಯ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿರುವ 18 ಆಧಾರ್‌ ಕೇಂದ್ರಗಳಲ್ಲಿ ದ್ವಿತೀಯ ಹಂತದ ಆಧಾರ್‌ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಯಾವುದೇ ಶುಲ್ಕ ಪಾವತಿಸದೆ ನೋಂದಣಿ ಮಾಡುವಂತೆ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ದಯಾನಂದ್‌ ಅವರು ತಿಳಿಸಿದ್ದಾರೆ.

ಲಾಲ್‌ಬಾಗ್‌ನ ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ, ಕದ್ರಿ ಮಲ್ಲಿಕಟ್ಟೆಯ ಮನಪಾ ಸಂಕೀರ್ಣ, ಪೆರ್ಮನ್ನೂರಿನ ಸಮುದಾಯ ಭವನ, ಉಳ್ಳಾಲದ ಸಮುದಾಯ ಭವನ, ನಗರದ ಲೈಟ್‌ಹೌಸ್‌ ಹಿಲ್‌ ರಸ್ತೆಯ ಕಾರ್ನಾಡ್‌ ಸದಾಶಿವ ರಾವ್‌ ಸ್ಮಾರಕ ಕಟ್ಟಡ, ಸುರತ್ಕಲ್‌ನ ಮನಪಾ ಉಪ ಕಚೇರಿ, ನಗರದ ಚಿಲಿಂಬಿ, ಮೂಡಬಿದಿರೆಯ ಐಬಿ ನಾಡ ಕಚೇರಿ, ಬಂಟ್ವಾಳದ ಹಳೆ ತಾಲೂಕು ಪಂಚಾಯತ್‌ ಕಚೇರಿ, ಪುತ್ತೂರಿನ ಸಮುದಾಯ ಭವನ, ವಿಟ್ಲದ ಪಂಚಾಯತ್‌ ಕಚೇರಿ, ಉಪ್ಪಿನಂಗಡಿಯ ಗ್ರಾಮ ಪಂಚಾಯತ್‌, ಬೆಳ್ತಂಗಡಿಯ ನಗರ ಪಂಚಾಯತ್‌, ಧರ್ಮಸ್ಥಳದ ಗ್ರಾಮ ಪಂಚಾಯತ್‌, ಪಂಪ್‌ವೆಲ್‌ನ ಕಪಿತಾನಿಯೋ, ಬೆಂಗ್ರೆ ಕಸ್ಬಾದ ರೊಸಾರಿಯೋ ಶಾಲೆ ಹಾಗೂ ಮೂಲ್ಕಿ ನಗರ ಪಂಚಾಯತ್‌ಗಳಲ್ಲಿರುವ ಆಧಾರ್‌ ಕೇಂದ್ರಗಳಲ್ಲಿ ನೋಂದಣಿ ಲಭ್ಯವಿದೆ.

ಈಗಾಗಲೇ ನೋಂದಣಿ ಮಾಡಿಸಿರುವ ಸಾರ್ವಜನಿಕರಿಗೆ ಅಂಚೆ ಮೂಲಕ ಆಧಾರ್‌ ಗುರುತಿನ ಚೀಟಿಗಳು ಬರುತ್ತಿದ್ದು, ಮತ್ತೂಮ್ಮೆ ನೋಂದಣಿ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿ ಚಾಲಕ

 

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ರಸ್ತೆಯಲ್ಲಿ ಸಿಕ್ಕಿದ 30,000 ರೂ. ನಗದು ಮತ್ತು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ವಾರಸುದಾರರಿಗೆ ಒಪ್ಪಿಸುವ ಮೂಲಕ ಟ್ಯಾಕ್ಸಿ ಚಾಲಕ ಚಂದ್ರಹಾಸ ಶೆಟ್ಟಿಗಾರ್‌ ಪ್ರಾಮಾಣಿಕತೆ ಮೆರೆದಿದ್ದಾರೆ.

ಮುಂಬಯಿನ ರಾಜೇಂದ್ರ ಕುಮಾರ್‌ ಅವರು ಮಂಗಳೂರಿನ ಇನ್‌ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವ ಪತ್ನಿ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಢಿಕ್ಕಿಯಲ್ಲಿದ್ದ ಬ್ಯಾಗು ಢಿಕ್ಕಿಯ ಬಾಗಿಲು ತನ್ನಿಂದ ತಾನೆ ತೆರೆದುಕೊಂಡು ರಸ್ತೆಗೆ ಬಿದ್ದಿತ್ತು. ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಚಂದ್ರಹಾಸ ಶೆಟ್ಟಿಗಾರ್‌ ಇದನ್ನು ಗಮನಿಸಿ ತನ್ನ ಕಾರನ್ನು ನಿಲ್ಲಿಸಿ ಬ್ಯಾಗನ್ನು ಹೆಕ್ಕಿದ್ದರು. ಅಷ್ಟರಲ್ಲಿ ಮುಂದೆ ಇದ್ದ ಕಾರು ಅಲ್ಲಿಂದ ಮುಂದೆ ಸಾಗಿತ್ತು. ಹಾಗೆ ಮುಂದೆ ಸಾಗಿದ್ದ ಕಾರು ವಿಮಾನ ನಿಲ್ದಾಣದ ಕಡೆಗೆ ಹೋಗಿರ ಬೇಕು ಎಂದು ಭಾವಿಸಿದ್ದರು.

ಚಂದ್ರಹಾಸ ಶೆಟ್ಟಿಗಾರ್‌ ಅವರು ಕೂಡಾ ವಿಮಾನ ನಿಲಾœÃ Â²Â£Ã Â²â€¢Ã Â³ÂÃ Â²â€¢Ã Â³â€  ಬಾಡಿಗೆಗೆ ಹೋಗುವವರಾಗಿದ್ದು, ವಿಮಾನ ನಿಲ್ದಾಣ ತಲುಪಿದ ಕೂಡಲೇ ಈ ಬ್ಯಾಗಿನ ವಾರೀಸುದಾರರು ಎಲ್ಲಾದರೂ ಇದ್ದಾರೆಯೇ ಎಂದು ವಿಚಾರಿಸಿದ್ದರು. ವಾರೀಸುದಾರರು ಪತ್ತೆಯಾಗದ ಕಾರಣ ಬಳಿಕ ಅವರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರ ವೈರ್‌ಲೆಸ್‌ನಲ್ಲಿ ಮಾಹಿತಿ ರವಾನೆಯಾಗಿತ್ತು.

ಬ್ಯಾಗು ಕಳೆದುಕೊಂಡಿದ್ದ ರಾಜೇಂದ್ರ ಕುಮಾರ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕನಿಗೆ ನಗರದ ಬಾವುಟಗುಡ್ಡೆ ತಲಪುವಾಗ ಬ್ಯಾಗು ಬಿದ್ದಿರುವ ವಿಷಯ ತಿಳಿಯಿತು. ಅವರು ಕೂಡಲೇ ಬಂದರು ಪೊಲೀಸ್‌ ಠಾಣೆಗೆ ತೆರಳಿ ಬ್ಯಾಗು ಕಳೆದು ಹೋದ ಬಗ್ಗೆ ದೂರು ಸಲ್ಲಿಸಿದ್ದರು.

ಇದೇ ವೇಳೆ ಚಂದ್ರಹಾಸ ಶೆಟ್ಟಿಗಾರ್‌ ಬಜಪೆ ಪೊಲೀಸರಿಗೆ ನೀಡಿದ್ದ ಮಾಹಿತಿ ವೈರ್‌ಲೆಸ್‌ನಲ್ಲಿ ರವಾನೆಯಾಗಿತ್ತು. ಹಾಗೆ ಚಂದ್ರಹಾಸ ಶೆಟ್ಟಿಗಾರ್‌ ಅವರು ಬಂದರು ಪೊಲೀಸ್‌ ಠಾಣೆಗೆ ಬಂದು ಬ್ಯಾಗನ್ನು ಅದರ ವಾರೀಸುದಾರರಿಗೆ ಒಪ್ಪಿಸಿದರು.

ಬ್ಯಾಗಿನ ವಾರೀಸುದಾರರು ಸೂಕ್ತ ಬಹುಮಾನ ನೀಡಿ ಚಂದ್ರಹಾಸ ಶೆಟ್ಟಿಗಾರ್‌ ಅವರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

 

ಮನೆಯಿಂದ ಚಿನ್ನಾಭರಣ, ಎಲೆಕ್ಟಾನಿಕ್‌ ವಸ್ತು ಕಳವು

ಮಂಗಳೂರು: ಇಲ್ಲಿನ ಆರ್ಯ ಸಮಾಜ ರಸ್ತೆಯ ಭಟ್‌ ಕಂಪೌಂಡ್‌ನ‌ಲ್ಲಿರುವ ಮಹಮದ್‌ ದ್ಯಾನಿಶ್‌ ಅವರ ಮನೆಯಿಂದ 30,000 ರೂ. ಮೌಲ್ಯದ ಚಿನ್ನದ ಸರ ಮತ್ತು ಪೆಂಡೆಂಟ್‌ ಹಾಗೂ 1 ಲಕ್ಷ ರೂ. ಬೆಲೆ ಬಾಳುವ ಎಲೆಕ್ಟಾÅನಿಕ್‌ ವಸ್ತುಗಳು ಕಳವಾಗಿವೆ.

ಮಹಮದ್‌ ದ್ಯಾನಿಶ್‌ ಅವರು ಮಂಗಳಾದೇವಿಯ ಟೈಲರಿ ರಸ್ತೆಯ ಫ್ಲಾÂಟ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆರ್ಯ ಸಮಾಜ ರಸ್ತೆಯ ಮನೆಗೆ ಬೀಗ ಹಾಕಲಾಗಿತ್ತು. ರವಿವಾರ ಈ ಮನೆಗೆ ಬಂದಾಗ ಮನೆಯ ಬಾಗಿಲು ಮುರಿದು ಕಳ್ಳರು ಕಳ್ಳತನ ನಡೆಸಿರುವ ಸಂಗತಿ ಗೊತ್ತಾಗಿದೆ.

ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಹಂಪನಕಟ್ಟೆ: ಮಹಿಳೆಯ ಚಿನ್ನದ ಸರ ಕಸಿದು ಪರಾರಿ

ಮಂಗಳೂರು: ಹಂಪನಕಟ್ಟೆ ಮಿಲಾಗ್ರಿಸ್‌ ಕ್ರಾಸ್‌ ರಸ್ತೆಯಲ್ಲಿ ರವಿವಾರ ಹಾಡು ಹಗಲೇ ಬೈಕ್‌ ಸವಾರರಿಬ್ಬರು ಮಹಿಳೆಯ ಕುತ್ತಿಗೆಯಿಂದ 70,000 ರೂ. ಮೌಲ್ಯದ ಎರಡು ಚಿನ್ನದ ಸರಗಳನ್ನು ಕಸಿದು ಪರಾರಿಯಾದ ಘಟನೆ ಸಂಭವಿಸಿದೆ.

ಬಂದರ್‌ನ ಬಜಿಲಕೇರಿಯ ಜೈನ ಬಸದಿ ಬಳಿಯ ನಿವಾಸಿ ಅಂಜಲಿ ದೇವಿ ಅವರು ಚಿನ್ನದ ಸರ ಕಳೆದು ಕೊಂಡ ಮಹಿಳೆ.

ಅಂಜಲಿ ದೇವಿ ಅವರು ಪುತ್ರಿ ನಿಶಾ ಜತೆ ಬಟ್ಟೆ ಖರೀದಿಗೆಂದು ಬೆಳಗ್ಗೆ 11.30ರ ವೇಳೆಗೆ ಮಿಲಾಗ್ರಿಸ್‌ ಕ್ರಾಸ್‌ ರಸ್ತೆಯ ಪಿಂಕಿ ಫ್ಯಾಶನ್‌ ಮಳಿಗೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಸವಾರರು ಏಕಾ ಏಕಿ ಅಂಜಲಿ ಅವರ ಕುತ್ತಿಗೆಗೆ ಕೈ ಹಾಕಿ 2 ಪವನು ತೂಕದ ಕರಿಮಣಿ ಸರ ಮತ್ತು 1 ಪವನು ತೂಕದ ಇನ್ನೊಂದು ಚಿನ್ನದ ಸರವನ್ನು ಎಳೆದು ಕಸಿದುಕೊಂಡು ಪರಾರಿಯಾಗಿದ್ದಾರೆ.

ಬೈಕ್‌ ಸವಾರರು ಹೆಲ್ಮೆಟ್‌ ಮತ್ತು ಕಪ್ಪು ಬಟ್ಟೆ ಧರಿಸಿದ್ದರು ಎಂದು ಅಂಜಲಿ ಅವರು ಬಂದರು ಪೊಲೀಸ್‌ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಮಿಲಾಗ್ರಿಸ್‌ ಕ್ರಾಸ್‌ ರಸ್ತೆ ಸಾಮಾನ್ಯವಾಗಿ ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದು, ಇಂದು ರವಿವಾರ ಆಗಿದ್ದರಿಂದ ಜನರ ಓಡಾಟ ಸ್ವಲ್ಪ ಕಡಿಮೆ ಇತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ಸರ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Good Friday 2025 | St. Theresa Church, KemmannuGood Friday 2025 | St. Theresa Church, Kemmannu
Way of Cross | St. Theresa Church, KemmannuWay of Cross | St. Theresa Church, Kemmannu
Maundy Thursday | St. Theresa Church, KemmannuMaundy Thursday | St. Theresa Church, Kemmannu
Palm Sunday | St. Theresa Church, KemmannuPalm Sunday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Gregory D’Souza (79 years) | LIVE from KemmannuFinal Journey of Gregory D’Souza (79 years) | LIVE from Kemmannu
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Final Journey of Jacintha Serrao (66 years) | LIVE From SasthanFinal Journey of Jacintha Serrao (66 years) | LIVE From Sasthan
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್
Final Journey of Leo J. Crasto (97 years) | LIVE from Kemmannu, UdupiFinal Journey of Leo J. Crasto (97 years) | LIVE from Kemmannu, Udupi
Final Journey of Fedrick Lewis (67 years) | LIVE from SanthekatteFinal Journey of Fedrick Lewis (67 years) | LIVE from Santhekatte
Final Journey of Mr. Charles D’Souza (63 years) | LIVE from UdyavarFinal Journey of Mr. Charles D’Souza (63 years) | LIVE from Udyavar
Final Journey Of Richard Sequeira | Live From Barkur || Kemmannu channelFinal Journey Of Richard Sequeira | Live From Barkur || Kemmannu channel
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
0:24 / 2:30:40 NEW YEAR MASS 2025 | LIVE from Kemmannu | Diocese of Udupi0:24 / 2:30:40 NEW YEAR MASS 2025 | LIVE from Kemmannu | Diocese of Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi