ಜನ ಸಾಗರವಾಯಿತು ಕೃಷಿ ಮೇಳ
ಅರಣ್ಯ ಇಲಾಖೆಯಿಂದ ನಿರ್ಮಿಸಲ್ಪಟ್ಟ ಅರಣ್ಯವನ್ನು ವೀಕ್ಷಿಸಲು ಸರತಿಸಾಲಿನಲ್ಲಿ ನಿಂತ ಜನರು.
ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಫೆ. 4ರಂದು ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆರಂಭವಾದ ರಾಜ್ಯ ಮಟ್ಟದ 31ನೇ ಕೃಷಿ ಮೇಳದ 2ನೇ ದಿನವಾದ ಫೆ. 5ರಂದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದುದರಿಂದ ಪರಿಸರ ಪೂರ್ತಿ ಜನಸಾಗರವಾಯಿತು.
ಮುಂಜಾನೆಯಿಂದಲೇ ಆಗಮಿಸತೊಡಗಿದ ಜನರ ಪ್ರವಾಹ ಕತ್ತಲೆಯವರೆಗೂ ಮುಂದುವರಿದಿತ್ತು. ವಸ್ತುಪ್ರದರ್ಶನ ಮಳಿಗೆ, ಜಾನುವಾರು, ಶ್ವಾನ ಹಾಗೂ ಕುಕ್ಕುಟ ಪ್ರದರ್ಶನದ ಸ್ಥಳ ಜನರಿಂದ ತುಂಬಿ ಹೋಗಿತ್ತು. ಅರಣ್ಯ ಇಲಾಖೆಯಿಂದ ನಿರ್ಮಿಸಲ್ಪಟ್ಟ ಅರಣ್ಯವನ್ನು ವೀಕ್ಷಿಸಲು ಭಾರೀ ಉದ್ದದ ಸರತಿಸಾಲಿನಲ್ಲಿ ಜನರು ನಿಲ್ಲಬೇಕಾಯಿತು. ಮದ್ಯಾಹ್ನ 11-30ಕ್ಕೆ ಅನ್ನಪೂರ್ಣದಲ್ಲಿ ಆರಂಭವಾದ ಅನ್ನದಾಸೋಹ ನಿರಂತರ ರಾತ್ರಿಯವರೆಗೂ ಮುಂದುವರಿಯಿತು.
ಬಜಗೋಳಿ ಮುಖ್ಯ ರಸ್ತೆಯಿಂದ ಕೃಷಿ ಮೇಳದ ಮೈದಾನಕ್ಕೆ ಬರುವ ತಿರುವಿನ ಮಹಾ ದ್ವಾರದಿಂದ ಮೇಳ ನಡೆಯುವ ಕಾಲೇಜಿನವರೆಗಿನ ರಸ್ತೆ ಪೂರ್ತಿ ಜನರೇ ತುಂಬಿದ್ದರು. ಎರಡೂ ಬದಿಗಳಲ್ಲಿದ್ದ ಅಂಗಡಿಗಳಿಗೂ ಬಜಗೋಳಿಯ ಪೇಟೆಯ ಎಲ್ಲಾ ಹೊಟೇಲುಗಳಿಗೂ ಭರ್ಜರಿ ವ್ಯಾಪಾರ ನಡೆಯಿತು. ಜನರನ್ನು ನಿಯಂತ್ರಿಸಲು ಕೆಲವು ಹೊಟೇಲಿನವರು ಸ್ವಸಹಾಯ ಪದ್ಧತಿಯ ವ್ಯವಸ್ಥೆ ಮಾಡಿದ್ದರು. ಜನಸಾಗರ ಕೃಷಿಮೇಳಕ್ಕೆ ಸೀಮಿತವಾಗಿರದೇ ಬಜಗೋಳಿ ಪೂರ್ತಿ ತುಂಬಿತ್ತು.
ಪೂರ್ವಾಹ್ನ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿಯ ಸಂದರ್ಭದಲ್ಲಿ ಸಭಾಂಗಣ ಪೂರ್ತಿ ಮಹಿಳೆಯರಿಂದಲೇ ತುಂಬಿದ್ದುದು ವಿಶೇಷವಾಗಿತ್ತು.
ಶನಿವಾರ ನಡೆದ ಜಾನುವಾರು ಪ್ರದರ್ಶನದಲ್ಲಿ 375 ಜಾನುವಾರುಗಳು, ಶ್ವಾನ ಪ್ರದರ್ಶನದಲ್ಲಿ 45 ಶ್ವಾನಗಳು ಹಾಗೂ ಕುಕ್ಕುಟ ಪ್ರದರ್ಶನದಲ್ಲಿ 75 ಕುಕ್ಕುಟಗಳು ಭಾಗವಹಿಸಿದ್ದವು. 11 ವಿವಿಧ ವಿಭಾಗಗಳಲ್ಲಿ ಜಾನುವಾರು ಸ್ಪರ್ಧೆ ಹಾಗೂ 12 ವಿಭಾಗಗಳಲ್ಲಿ ಶ್ವಾನಗಳ ಮತ್ತು 2 ವಿಭಾಗಗಳಲ್ಲಿ ಕುಕ್ಕುಟ ಸ್ಪರ್ಧೆ ನಡೆಯಿತು.
ಮಹಿಳಾ ವಿಚಾರಗೋಷ್ಠಿ ಸೇರಿದಂತೆ ’ಸಾವಯವ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ’, ’ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್’ ಹಾಗೂ ’ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ’ ಎಂಬ ನಾಲ್ಕು ವಿಚಾರಗೋಷ್ಠಿಗಳು ನಡೆದವು.
ಇಂದು ಸಮಾರೋಪ
ಮೂರು ದಿನಗಳ ಕೃಷಿ ಮೇಳ ರವಿವಾರ ಸಮಾಪನಗೊಳ್ಳಲಿದೆ. ಪೂರ್ವಾಹ್ನ 10 ಗಂಟೆಗೆ ಕೃಷಿ ಮತ್ತು ಮಾಧ್ಯಮ, 11.30ಕ್ಕೆ ಘನತ್ಯಾಜ್ಯ ನಮ್ಮೆಲ್ಲರ ಹೊಣೆ, 1.30ಕ್ಕೆ ಕೃಷಿ ಮತ್ತು ಯುವಜನತೆ: ಆಧುನಿಕತೆ ಕೃಷಿಗೆ ಶಾಪವೆ ? ಮತ್ತು 3 ಗಂಟೆಗೆ ಜನಪ್ರತಿನಿಧಿಗಳೊಂದಿಗೆ ಸಂವಾದ ಎಂಬ 4 ವಿಚಾರಗೋಷ್ಠಿಗಳು ನಡೆಯಲಿವೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಮಾರೋಪ ಮಾಡಲಿದ್ದು, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ ನಡೆದ ಮಹಿಳಾಗೋಷ್ಠಿಯ ಸಂದರ್ಭ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಭಾಸದರೊಂದಿಗೆ ಕುಳಿತು ಗೋಷ್ಠಿಯಲ್ಲಿ ಭಾಗವಹಿಸಿದುದು ಎಲ್ಲರ ಗಮನ ಸೆಳೆಯಿತು.
ಅನ್ನಪೂರ್ಣದಲ್ಲಿ ಸುಮಾರು 80,000 ಜನರು ಊಟದ ರುಚಿ ಸವಿದರು.
ಅನ್ನಪೂರ್ಣದಲ್ಲಿ ಕೆಲ ನಿಮಿಷಗಳ ಕಾಲ ಸ್ವಯಂ ಡಾ| ಡಿ. ವೀರೇಂದ್ರ ಹೆಗ್ಗಡೆಯವರೇ ಬಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಧೂಳನ್ನು ನಿಯಂತ್ರಿಸಲು ಪದೇಪದೇ ಮೈದಾನವಿಡೀ ನೀರು ಸಿಂಪಡಿಸಲಾಗುತ್ತಿತ್ತು.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದರೂ ಸಾವಿರಾರು ಸ್ವಯಂಸೇಕರ ಕಾರ್ಯಶೈಲಿಯಿಂದಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಅಥವಾ ತೊಂದರೆಯಾಗಲಿಲ್ಲ.
ಸಂಘಟಿತ ಶ್ರಮದಿಂದಯಶಸ್ಸು: ಡಾ| ಹೆಗ್ಗಡೆ
ಕಾರ್ಕಳ : ಕುಟುಂಬದ ಯಜಮಾನ ಹಾಗೂ ಕುಟುಂಬ ಆಧಾರಿತ ಮಹಿಳೆಯರು ಏಕತೆಯಿಂದ ಶ್ರಮಿಸಿ ಉಳಿತಾಯ ಪ್ರವೃತ್ತಿಯೊಂದಿಗೆ ದುಡಿದುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಸಾಫಲ್ಯವಾಗಿ ಯಶಸ್ಸು ಸಾಧ್ಯವಾಗಿದೆ ಎಂದು ಯೋಜನೆಯ ನೇತಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಬಜಗೋಳಿಯಲ್ಲಿ ನಡೆಯುತ್ತಿರುವ ಕೃಷಿಮೇಳದ ಅಂಗವಾಗಿ ಶನಿವಾರ ನಡೆದ ಸಾವಯವ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ ಗೋಷ್ಠಿಯ ಬಳಿಕ ಜಾನುವಾರು ತಳಿ ಪೋಷಕ, ಸಾವಯವ ಗೊಬ್ಬರ ತಯಾರಿಕಾ ಪ್ರಮುಖರಿಗೆ, ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸ್ವಾತಂತ್ರÂದ ಬಳಿಕ 5 ರೂ. ನಾಣ್ಯ ಅಥವಾ ನೋಟಿನ ಬಗ್ಗೆ ಮಾಹಿತಿ ಇರದ ಮಹಿಳೆ ಕಳೆದ 20 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಗುಂಪುಗಳಿಗೆ ಸೇರಿದ ಬಳಿಕ 40 ಸಾವಿರ ರೂ. ಸಾಲ ಸೌಲಭ್ಯದೊಂದಿಗೆ ಉಳಿತಾಯ ಸಾಧನೆಗೈದಿದ್ದಾರೆ. ಪ್ರಗತಿಬಂಧು ತಂಡದ ಪುರುಷರು ದುಶ್ಚಟಗಳಿಂದ ಮುಕ್ತರಾಗಿ ಉಳಿತಾಯದೊಂದಿಗೆ ಪ್ರಗತಿ ಸಾಧಿಸಿರುತ್ತಾರೆ. ಶ್ರೀಪದ್ಧತಿ ಭತ್ತದ ಬೆಳೆ ಅನುಷ್ಠಾನದಿಂದ ಭತ್ತದ ಫಸಲು ಅಧಿಕವಾಗಿದ್ದು, ಗ್ರಾಮೀಣ ಕೃಷಿ , ರೈತಾಪಿ ಜನತೆ ಸ್ವಾವಲಂಭಿ ಬಾಳನ್ನು ನಡೆಸುತ್ತಿರುವುದು ಗ್ರಾಮಾಭಿವೃದ್ಧಿ ಯೋಜನೆಯ ಅನುಷ್ಠಾನದಿಂದಾಗಿದೆ ಎಂದವರು ಹೇಳಿದರು.
ಕೃಷಿಮೇಳ: ಅಧಿಕಾರಿಗಳೊಂದಿಗೆ ಸಂವಾದ
ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ನಡೆಯುತ್ತಿರುವ 31ನೇ ಕೃಷಿ ಮೇಳದಲ್ಲಿ ಶನಿವಾರ 6ನೇ ವಿಚಾರಗೋಷ್ಠಿಯಾಗಿ ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.
ಕೃಷಿಕರ ವಿವಿಧ ಪ್ರಶ್ನೆಗಳಿಗೆ ಸಂಬಂಧಿತ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಉಡುಪಿಯ ಪ್ರಭಾರ ಜಿಲ್ಲಾಧಿಕಾರಿ ಟಿ.ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ರಾಜಶೇಖರ್, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಜಂಟಿ ಕೃಷಿ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ| ವಿ.ಎಸ್. ಅಶೋಕ್, ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಎಂ.ಟಿ. ಮಂಜುನಾಥ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ಉಪೇಂದ್ರ ನಾಯಕ, ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ಮಹಮ್ಮದ್ ಅಕºರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಂ.ಎಸ್. ಸುಮನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ| ಡಿ.ವಿ. ಮಹೀದಾಸ್, ಗ್ರಾಮಾಂತರ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಜಿ. ದೇವರಾಜ್, ಕುದುರೆಮುಖ ವನ್ಯಜೀವಿ ವಿಭಾಗದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್, ಸಹಕಾರ ಸಂಘಗಳ ಉಪನಿಬಂಧಕಿ ಕೆ. ನಯನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಚಂದ್ರ ಬಾಯರಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ| ಬಿ. ಧನಂಜಯ, ಕಾರ್ಕಳ ತಹಶೀಲ್ದಾರ ಎಂ. ಜಗನ್ನಾಥ್ ರಾವ್, ಕಾರ್ಕಳ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಕುಮಾರ್, ಕೈಮಗ್ಗ ಮತ್ತು ಜವುಳಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಆರ್. ಯೋಗೀಶ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಬಿ. ಊರ್ಮಿಳಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನಿರ್ದೇಶಕರಾದ ಮಹಾವೀರ ಅಜ್ರಿ, ದುಗ್ಗೇ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ಸಂವಾದದ ಪ್ರಮುಖ ಅಂಶಗಳು
ಪಶುಸಂಗೋಪನಾ ಇಲಾಖೆಯು ಪಶು ವೈದ್ಯಕೀಯ ಸೇವೆಗೆ ಮಾತ್ರ ಕೆಲಸ ಮಾಡುತ್ತಿಲ್ಲ. ಸ್ಥಳೀಯ ಜಾನುವಾರು ತಳಿ ಅಭಿವೃದ್ಧಿಯೂ ಸೇರಿದಂತೆ ತಳಿ ಸಂವರ್ಧನೆಗೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ತಳಿ ಸಂವರ್ಧನಾ ನೀತಿ ತರಲಾಗುತ್ತಿದೆ.
ಉಡುಪಿ ಜಿಲ್ಲೆಯ ತಾಲೂಕುಗಳಾದ ಉಡುಪಿಯಲ್ಲಿ 4, ಕುಂದಾಪುರದಲ್ಲಿ 3, ಕಾರ್ಕಳದಲ್ಲಿ 2 ಸೇರಿದಂತೆ ಒಟ್ಟು 9 ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಗಂಧದ ಗಿಡಗಳನ್ನು ಖಾಸಗಿ ಸ್ಥಳಗಳಲ್ಲಿ ಬೆಳೆಸಲು ಸರಕಾರ ನಿಗದಿಪಡಿಸಿದ ಬೆಲೆಯಲ್ಲಿ ನೀಡುವ ವ್ಯವಸ್ಥೆ ಇದೆ.
ಕಾಡುಕೋಣದ ಹಾವಳಿಗೆ ಕಳೆದ ವರ್ಷ 8 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ. ಮಂಗನ ಹಾವಳಿ ಸಮಸ್ಯೆಗೆ ಮಂಗಗಳ ಸಂತಾನ ನಿಯಂತ್ರಣ ಯೋಜನೆ ಸರಕಾರದ ಮುಂದಿದ್ದು ಕಾರ್ಯರೂಪಕ್ಕೆ ಬರಬೇಕಾಗಿದೆ.
108 ತುರ್ತು ಸೇವೆ ಎಲ್ಲಾ ಗ್ರಾಮಗಳಿಗೆ ಲಭ್ಯವಿದ್ದು, 1 ಲಕ್ಷ ಜನಸಂಖ್ಯೆಗೆ 1 ವಾಹನ ವ್ಯವಸ್ಥೆಯಿದೆ.
ವೈದ್ಯರ ಕೊರತೆ ಇಲಾಖೆಯ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯ 4 ಪ್ರಾ.ಆ. ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದ್ದು, ಸರಕಾರಿ ನಿಯಮದಂತೆ ನೇಮಕಾತಿ ಪ್ರಕ್ರಿಯೆ ಸಾಗುತ್ತಿದೆ.
ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಪಠ್ಯ ಬೋಧನಾ ಚಟುವಟಿಕೆಗೆ ತೊಂದರೆಯಾದರೂ ಅರಗಿಸಿಕೊಳ್ಳಬೇಕಾಗಿದೆ.
ಮನೆ ನಿವೇಶನಗಳಿಗೆ ಹೆಚ್ಚಿದ ಬೇಡಿಕೆಯಿಂದ ಹೆಚ್ಚಿನ ಲಾಭದ ದೃಷ್ಟಿಯಿಂದ ಸ್ಥಳ ಮಾರಾಟ ನಡೆಯುತ್ತಿದೆ. ಇದರಿಂದ ಕೃಷಿ ಭೂಮಿ ಪರಿವರ್ತನೆಗೊಳ್ಳುತ್ತಿದೆ ಹಾಗೂ ಸಹಜವಾಗಿ ಕೃಷಿ ಕ್ಷೀಣಿಸುತ್ತಿದೆ. ಇದನ್ನು ನಿವಾರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ಸ್ವರ್ಣ ವಸ್ತ್ರನೀತಿ ಯೋಜನೆ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲಭರಿತ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕಾರ್ಯ ಕೈಮಗ್ಗ ಮತ್ತು ಜವುಳಿ ಇಲಾಖೆಯಿಂದ ನಡೆಯುತ್ತಿದೆ. 18 - 35 ವಯೋಮಾನದ ಕನಿಷ್ಠ 5ನೇ ತರಗತಿ ಪಾಸಾದವರಿಗೆ ಉಚಿತ ತರಬೇತಿ, 2,000 ರೂ. ಶಿಷ್ಯವೇತನ, ಪ್ರಮಾಣ ಪತ್ರ ಹಾಗೂ ಉದ್ಯೋಗ ದೊರಕುವಲ್ಲಿ ಮಾರ್ಗದರ್ಶನ ನೀಡಲಾಗುವುದು.
ಮಾನವನಿಂದ ಸಾಧ್ಯವಾಗದ, ಕೇವಲ ಯಂತ್ರದಿಂದ ಸಾಧ್ಯವಾಗುವ ಕೆಲಸಗಳ ಸಂದರ್ಭಗಳಲ್ಲಿ ಮಾತ್ರ ಜೆಸಿಬಿ ಯಂತ್ರದ ಮೂಲಕ ಮಾಡಿದ ಕಾರ್ಯಗಳಿಗೆ ಉದ್ಯೋಗ ಖಾತ್ರಿ ಮಂಜೂರು ಮಾಡಲಾಗಿದೆಯೇ ಹೊರತು, ಪೂರ್ತಿ ಯಂತ್ರದಿಂದಲೇ ಮಾಡಿದ ಕೆಲಸಗಳಿಗೆ ಮಂಜೂರು ನೀಡಿಲ್ಲ.
ಒಳನಾಡು ಕೃಷಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಮೀನು ಕೃಷಿಯನ್ನು ಕೃಷಿಕರು ಉಪಕಸುಬನ್ನಾಗಿ ಮಾಡಬಹುದು ಹಾಗೂ ಲಾಭದಾಯಕವಾಗಿದೆ.
- ಎ. ಸತ್ಯೇಂದ್ರ ಕಿಣಿ
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Judith Lewis (91 years) | LIVE From Kallianpur
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link