ವಿಕಲಚೇತನರ ಸಾಧನೆ ಹೆಮ್ಮೆಯ ವಿಚಾರ : ದಿನಕರ ಬಾಬು


Richard D’Souza
Kemmannu News Network, 04-12-2019 18:48:56


Write Comment     |     E-Mail To a Friend     |     Facebook     |     Twitter     |     Print


ಉಡುಪಿ : ಇತ್ತೀಚಿನ ದಿನಗಳಲ್ಲಿ ವಿಶೇಷ ಚೇತನರು ತಮ್ಮ ನ್ಯೂನ್ಯತೆ ಮೆಟ್ಟಿ ನಿಂತು, ಸಾಧನೆಗಳ ಹಾದಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ವಕೀಲರ ಸಂಘ (ರಿ) ಉಡುಪಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘ, ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ (ಮಿನಿಹಾಲ್)ದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಹಾಗೂ ವಿಶೇಷ ಶಾಲೆಯ ಮಕ್ಕಳು ಸಿದ್ಧಪಡಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

     ವಿಶೇಷ ಚೇತನ ಮಕ್ಕಳ ಸೇವೆ ಮಾಡುವ ಸಂಸ್ಥೆಗಳು ಮಹತ್ತರವಾದ ಕಾರ್ಯ ನಿರ್ವಹಿಸುತ್ತಿದ್ದು, ಇವರ ಕಾರ್ಯ ಪ್ರಶಂಸನೀಯ. ಮುಂದೆ ಇಂತಹ ಕಾರ್ಯಗಳು ಮುಂದುವರಿಯಲಿ. ಬಾರಿ ವಿಕಲಚೇತನರಿಗೆಈ ಬಾರಿ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಸಂತೋಷ ತಂದಿದೆ ಹಾಗೂ ಇದರಿಂದಾಗಿ ವಿಶೇಷ ಚೈತನ್ಯರಿಗೆ ಸಾಧಿಸಲು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಹೇಳಿದರು.

     ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ವಿಶೇಷ ಚೇತನರಲ್ಲಿ ಒಂದು ರೀತಿ ವಿಶೇಷ ಚೈತನ್ಯ ಇದ್ದು, ಸಾಮಾನ್ಯರನ್ನು ಮೀರಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶೇಷ ಚೇತನರೂ ಸಾಮಾನ್ಯ ಮಕ್ಕಳಂತೆ ಶಾಲೆ ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾಧಿಸಿ ತೋರಿಸುತ್ತಿದ್ದಾರೆ.

     ವಿಶೇಷ ಚೇತನ ಮಕ್ಕಳು ತಮಗೆ ಸಿಕ್ಕ ಶಿಕ್ಷಣ, ಪೆÇ್ರೀತ್ಸಾಹ, ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮ್ಮ ಕಾಲ ಮೇಲೆ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಅವರಲ್ಲಿ ಬಹುಮಂದಿ ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿರುವುದು ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ. ವಿಶೇಷ ಚೇತನ ಮಕ್ಕಳ ಸಾಧನೆಯ ಹಿಂದೆ ಪೆÇೀಷಕರು, ಶಿಕ್ಷಕರು, ಪಾಲಕರ ಪೆÇ್ರೀತ್ಸಾಹ ಹಾಗೂ ಪಾತ್ರ ಮಹತ್ವದ್ದಾಗಿದ್ದು, ಮುಂದೆಯೂ ಹೆಚ್ಚಿನ ರೀತಿಯಲ್ಲಿ ವಿಕಲ ಚೇತನರಿಗೆ ಪ್ರೋತ್ಸಾಹಿಸಿ ಅವರ ಏಳಿಗೆಗೆ ಕೈ ಜೋಡಿಸುವಂತಾಗಲಿ.  ನಿಟ್ಟಿನಲ್ಲಿ ಸರಕಾರದಿಂದ ಸಹಕಾರ ನೀಡುತ್ತಿದ್ದು, ಸರಿಯಾದ ರೀತಿಯಲ್ಲಿ ಇದರ ಸದುಪಯೋಗ ಪಡೆಯುವಂತಾಗಬೇಕು ಎಂದು ಹೇಳಿದರು.

      ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹೆಲೋತ್ ಮಾತನಾಡಿ, ಎಲ್ಲಾ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಕವಾಗಿರುತ್ತದೆ. ಸುಪ್ತ ಪ್ರತಿಭೆಗಳನ್ನು ಗುರುತಿಸಿ ಹೊರತೆಗುವ ಕೆಲಸವನ್ನು ಪೋಷಕರು, ಶಿಕ್ಷಕರು ಹಾಗೂ ನಾವೆಲ್ಲಾ ಬಹಳ ಮುತುವರ್ಜಿಯಿಂದ ಮಾಡಬೇಕು. ಆದರೆ ಸಮಾಜದಲ್ಲಿ ವಿಶೇಷ ಚೇತನ (ವಿಕಲಚೇತನರು ಹಾಗೂ ಬುದ್ಧಿಮಾಂದ್ಯ) ಮಕ್ಕಳನ್ನು ಕೀಳಾಗಿ ನೋಡಲಾಗುತ್ತಿದೆ. ಧೋರಣೆಯನ್ನು ಬಿಟ್ಟು ಅವರ ಏಳಿಗೆಯತ್ತ ಎಲ್ಲರೂ ಶ್ರಮಿಸುವಂತಾಗಬೇಕು. ಸರಕಾರದಿಂದ ವಿಶೇಷ ಚೇತನರಿಗಾಗಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು. ಹಾಗೂ ವಿಶೇಷ ಚೇತನರ ಅಭಿವೃದ್ಧಿಗಾಗಿ ಸರಕಾರದೊಂದಿಗೆ ಸರಕಾರೇತರ ಸಂಸ್ಥೆಗಳು ಕೈಜೋಡಿಸುವಂತಾಗಬೇಕು ಎಂದು ಹೇಳಿದರು.

     ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಮಾತನಾಡಿ, ಮಕ್ಕಳಿಂದ ತಯಾರಾದ ಕರಕುಶಲ ವಸ್ತುಗಳ ಪ್ರದರ್ಶನವು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಅನಾವರಣ ಮಾಡಿದೆ. ಕಲೆ ಹಾಗೂ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಉನ್ನತ ಶ್ರೇಣಿಗೆ ಏರುವಂತೆ ಮಾಡಬೇಕು ಎಂದು ಹೇಳಿದರು.

 ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು ಸಾಧನೆಗೆ ಅಡ್ಡಿಯಲ್ಲ ಎನ್ನುವುದಕ್ಕೆ ವಿಶೇಷ ಚೇತನ ಮಕ್ಕಳ ಸಾಧನೆಗಳೇ ಸಾಕ್ಷಿ. ನ್ಯೂನ್ಯತೆ ಮೀರಿ ಅದನ್ನೇ ಶಕ್ತಿಯಾಗಿಸಿ ಮುನ್ನಡೆದು ನಾವು ಯಾರಿಗೂ ಕಡಿಮೆ ಇಲ್ಲಾ ಎನ್ನುವುದನ್ನು ಜಗತ್ತಿಗೆ ಸಾಧಿಸಿ ತೋರಿಸಬೇಕು ಎಂದು ಹೇಳಿದರು.

 ವಿಶೇಷ ಚೇತರರ ಏಳಿಗೆಗಾಗಿ ಸರಕಾರದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವಾಗಬೇಕು. ವಿಶೇಷ ಚೇತನರ ಹಕ್ಕುಗಳನ್ನು ತಿಳಿದು ಮುನ್ನಡೆಯಬೇಕು ಹಾಗೂ ವಿಶೇಷ ಚೇತನರ ವಿಚಾರದಲ್ಲಿ ಸಮಾಜದ ದೃಷ್ಟಿ ಬದಲಾಗಬೇಕು. ಸರಕಾರದಿಂದ ವಿಶೇಷ ಚೇತನರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವಂತಾಗಬೇಕು.

     ವಿಶೇಷ ಚೇತನರ ಸಮಸ್ಯೆಗಳ ಕುರಿತಾದ ಮನವಿ ಹಾಗೂ ವಿಶೇಷ ಶಿಕ್ಷಕರ ವೇತನ ಪರಿಷ್ಕರಣೆ ವಿಚಾರವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸಿ, ಸಮಸ್ಯೆ ಪರಿಹಾರಕ್ಕೆ ಶ್ರಮ ವಹಿಸಲಾಗುವುದು. ಹಾಗೂ ಯಾವುದೇ ಹೋರಾಟಕ್ಕೆ, ಕಾನೂನಾತ್ಮಕ ಸಲಹೆಗಳನ್ನು ಉಚಿತವಾಗಿ ನೀಡುವುದಷ್ಟೇ ಅಲ್ಲದೇ, ಕಾನೂನಿನಡಿ ಪರಿಹಾರ ನೀಡಲು ಸಹಕರಿಸುತ್ತೆವೆ ಎಂದು ತಿಳಿಸಿದರು. 

     ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ವಿಶೇಷ ಚೇತನರಿಗೆ ಅನುಕಂಪ ಬೇಡ, ಪ್ರೀತಿ ತೋರಿಸಿ ಬೆಳೆಸುವ ಕಾರ್ಯವಾಗಬೇಕು. ಇವರನ್ನು ನೋಡಿಕೊಳ್ಳುವ ಶಿಕ್ಷಕ-ಪಾಲಕರ ಶ್ರಮ ಮಹತ್ವದ್ದು. ವಿಚಾರದಲ್ಲಿ ಸರಕಾರ ಮಾತ್ರ ಸೌಲಭ್ಯಗಳನ್ನು ನೀಡಿದರೆ ಸಾಲದು, ಸರಕಾರೇತರ ಸಂಸ್ಥೆಗಳು ಮುಂದೆ ಬಂದು ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು.

     ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ವಿಶೇಷ ಚೇತನ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಲಕ್ಷ್ಮೀ, ಕ್ರೀಡಾ ಕ್ಷೇತ್ರದಲ್ಲಿ ಆರ್ಚನಾ, ಸಮಾಜ ಸೇವೆಯಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಮಹಮ್ಮದ್ ರಫೀಕ್, ಅಂಗವಿಕಲರ ಕ್ಷೇತ್ರದಲ್ಲಿ ರಮ್ಯ ಐತಾಳ್, ಕರಕುಶಲ ಕ್ಷೇತ್ರದಲ್ಲಿ ಲಲಿತಾ ಕೊರವಾಡಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್ಎಸ್ಎಲ್ಸಿ ಪಾಸಾದ ಮತ್ತು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದ ವಿಶೇಷ ಚೇತನ ಕ್ರೀಡಾಳುಗಳನ್ನು ಅಭಿನಂದಿಸಲಾಯಿತು. ಇದೇ ವೇಳೆ ಸಾಧನೆ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

 ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬಡಗುಬೆಟ್ಟು ಕ್ರೆ.ಕೋ. ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಕೆ. ಜಯಕರ ಶೆಟ್ಟಿ ಇಂದ್ರಾಳಿ, ಶೇಷ ಶಯನ ಕಾರಿಂಜ, ಜೋಸೆಪ್ ನರೋನ, ಮಂಜುನಾಥ ಹೆಬ್ಬಾರ್, ಆಗ್ನೇಸ್ ಕುಂದರ್, ಆಸರೆ ಸಂಸ್ಥೆಯ ಮುಖ್ಯಸ್ಥ ಜೈವಿಠ್ಠಲ್, ಸದಾನಂದ, ದಯಾನಂದ, ಬಾಲ ಭವನದ ಶಿಕ್ಷಕ ಅಡಿಗ, ರಕ್ಷಣಾ ಘಟಕದ ಅಧಿಕಾರಿ ಪ್ರಭಾಕರ ಆಚಾರ್, ಗಣೇಶ್,  ರೂಪ ಲಕ್ಷ್ಮೀ, ವಿಶೇಷ ಶಾಲೆಯ ಮುಖ್ಯಸ್ಥರು, ಹಿರಿಯ ನಾಗರಿಕ ವೇದಿಕೆ ಸಿಬ್ಬಂದಿ, ವಿವಿಧ ಶಾಲೆಗಳಿಂದ ಆಗಮಿಸಿದ ವಿಕಲಚೇತನ ಮಕ್ಕಳು, ಶಿಕ್ಷಕರು, ಪೆÇೀಷಕರು ಮತ್ತಿತರರು ಉಪಸ್ಥಿತರಿದ್ದರು.

     ಕಾರ್ಯಕ್ರಮವನ್ನು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾಂತಿ ಹರೀಶ್ ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




UNDO | A Konkani Short Film | ICYM Kallianpur Dean
View More

Final Journey of Dulcine Cecilia Mathias (89 years) | LIVE from Shirva | UdupiFinal Journey of Dulcine Cecilia Mathias (89 years) | LIVE from Shirva | Udupi
Titular Feast of St. Theresa Church, Kemmannu, UdupiTitular Feast of St. Theresa Church, Kemmannu, Udupi
Final Journey of Dolphy Louis Suares (61 years) | LIVE from Katapady | UdupiFinal Journey of Dolphy Louis Suares (61 years) | LIVE from Katapady | Udupi
Final Journey Of Mrs. Lenny Machado (74 Years) | LIVE From Kemmannu | UdupiFinal Journey Of Mrs. Lenny Machado (74 Years) | LIVE From Kemmannu | Udupi
Mount Rosary Church - Rozaricho Gaanch Sep, 2025 IssueMount Rosary Church - Rozaricho Gaanch Sep, 2025 Issue
Final Journey Of Mrs. Lilly D Souza (68Years) | LIVE From Mount Rosary, Santhekatte, UdupiFinal Journey Of Mrs. Lilly D Souza (68Years) | LIVE From Mount Rosary, Santhekatte, Udupi
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi