ಮುಂಬಯಿ ; ಅನಿತಾ ಪೂಜಾರಿ ತಾಕೊಡೆ ರಚಿತ `ಸುವರ್ಣಯುಗ’ ಕೃತಿ ಲೋಕಾರ್ಪಣೆ
Kemmannu News Network, 02-10-2023 18:45:28
ಮುಂಬಯಿ ; ಅನಿತಾ ಪೂಜಾರಿ ತಾಕೊಡೆ ರಚಿತ `ಸುವರ್ಣಯುಗ’ ಕೃತಿ ಲೋಕಾರ್ಪಣೆ - ಕಲಿಯುಗದಲ್ಲಿ ಸುವರ್ಣಯುಗ ಕಂಡ ನಾವು ಧನ್ಯರು : ಸಚಿವ ಮಧು ಬಂಗಾರಪ್ಪ
ಮುಂಬಯಿ, ಸೆ.30: ಹೃದಯದಲ್ಲಿ ಜಯಣ್ಣರಿಗೆ ಸ್ಥಾನ ದೊರೆತಿದೆ ಎಂದು ತುಂಬಿದ ಸಭಾಗೃಹ ಕಂಡಾಗಲೇ ತಿಳಿಯುತ್ತದೆ. ಕಲಿಯುಗದಲ್ಲಿ ಜಯ ಸುವರ್ಣ ಯುಗವನ್ನು ಕಂಡ ನಾವು ಅದೃಷ್ಟವಂತರು. ಈ ಯುಗವು ತಮ್ಮೆಲ್ಲರಿಗೂ ಪ್ರಾಪ್ತಿಯಾಗಿ ಮುಂದೊಂದು ದಿನ ಕೃತಿ ರಚಿಸಿದÀ ಅನಿತಾಯುಗವೂ ಕೂಡಿ ಬರಲಿ ಎಂದು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಬಿಲ್ಲವರ ಯುಗ ಪುರುಷರೆಂದೇ ಜನಜನಿತರಾದ ಜಯ ಸುವರ್ಣ ಅವರ ಸಂಸ್ಮರಣೆ ಮತ್ತು ಗೌರವಾರ್ಪಣಾ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಯುವ ಕವಿ, ಲೇಖಕಿ, ಸಂಶೋಧನಾ ವಿದ್ಯಾಥಿರ್üನಿ ಅನಿತಾ ಪೂಜಾರಿ ತಾಕೊಡೆ ರಚಿತ ಜಯ ಸುವರ್ಣ ಅವರ ಬದುಕಿನ ಇತಿಹಾಸ ಕಡೆದಿಟ್ಟ ಜೀವನ ಸಾಧನೆಯ ಕುರಿತ `ಸುವರ್ಣಯುಗ’ ಕೃತಿ ಲೋಕಾರ್ಪಣೆಗೈದ್ದು ಸಾಧಕರಿಗೆ ಗೌರವಾರ್ಪಣೆ ನಡೆಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಜೀವನುದ್ದಕ್ಕೂ ಜಯಣ್ಣರ ಪಾತ್ರ ಎದ್ದು ಕಾಣಿಸುತ್ತಿತ್ತು ಲೇಖಕಿ ಅನಿತಾ ಅವರು ಕೃತಿಗೆ ಸುವರ್ಣಯುಗ ಅನ್ನುವ ಒಳ್ಳೆಯ ಹೆಸರನ್ನು ಇಟ್ಟಿದ್ದು ಇದೊಂದು ನಿಜಾರ್ಥದ ಅರ್ಥಗರ್ಭಿತ ಕೃತಿಯಾಗಿದೆ. ಬೆಳೆಯುತ್ತಾ ಬೆಳೆಯುತ್ತ ಸರಳವಾಗಿ ಮುನ್ನಡೆದರೆ ಮಾತ್ರ ನಮ್ಮ ಗೌರವ ಹೆಚ್ಚಾಗುತ್ತದೆ ಇದನ್ನೇ ನಮ್ಮಪ್ಪನೂ, ಜಯಣ್ಣನೂ ಕಲಿಸಿದವರು. ನಾರಾಯಣ ಗುರುಗಳ ತತ್ವಗಳನ್ನು ಬಲವಾಗಿ ನಂಬಿ ಬಾಳಿದ ಜಯಣ್ಣ ತೊಂದರೆಯಾದಾಗ ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿದ್ದವರು. ಆದುದರಿಂದಲೇ ಜನನಾಯಕರಾಗಿ ಸಾಧಕರೆಣಿಸಿ ನಾಯಕರ ನಾಯಕರೆಣಿಸಿದ ಇವರು ಎಂದೆಂದಿಗೂ ಅಜರಾಮರರುವರು ಎಂದೂ ಸಚಿವ ಬಂಗಾರಪ್ಪ ತಿಳಿಸಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆ ಮುನ್ನ ಮುಂಬಯಿ ವಿವಿ ಕನ್ನಡ ವಿಭಾಗ ಪ್ರಕಟಿಸಿದ 97 ಕೃತಿಗಳ ಪ್ರದರ್ಶನಕ್ಕೆ ಸಂಸದ ಗೋಪಾಲ ಶೆಟ್ಟಿ ಚಾಲನೆ ನೀಡಿದರು.
ಅತಿಥಿü ಅಭ್ಯಾಗತರುಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಂ ಪೂಜಾರಿ, ಹಿರಿಯ ಸಾಹಿತಿ ಡಾ| ವಿಶ್ವನಾಥ ಕಾರ್ನಾಡ್, ಸಾಯಿ ಪ್ಯಾಲೇಸ್ ಹೋಟೆಲ್ ಸಮೂಹದ ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, ಗೌರವಾನ್ವಿತ ಅತಿಥಿüಗಳಾಗಿ ಕರ್ನಾಟಕದ ಮಾಜಿ ಸಚಿವ ಡಾ| ಕೆ.ಸಿ ನಾರಾಯಣ ಗೌಡ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಭಾರತ್ ಬ್ಯಾಂಕ್ನ ನಿರ್ದೇಶಕ ಹಾಗೂ ಜಯಲೀಲಾ ಟ್ರಸ್ಟ್ನ ಮುಖ್ಯಸ್ಥ ಸೂರ್ಯಕಾಂತ್ ಜಯ ಸುವರ್ಣ, ಭಾರತ್ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಂ.ಸಾಲಿಯನ್ ವೇದಿಕೆಯನ್ನಲಂಕರಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಹೆಸರಾಂತ ನಿರೂಪಕ, ಕಲಾವಿದ ಅಶೋಕ ಪಕ್ಕಳ ಇವರನ್ನು ಅತಿಥಿüಗಳು ಕನ್ನಡ ವಿಭಾಗದ ಪರವಾಗಿ ಗೌರವಿಸಿ ಅಭಿನಂದಿಸಿದರು. ಕೃತಿಕರ್ತೆ ಅನಿತಾ ಪೂಜಾರಿ ಅವರನ್ನು, ಸಂಸದ ಗೋಪಾಲ ಸಿ.ಶೆಟ್ಟಿ ಮತ್ತು ಸಚಿವ ಬಂಗಾರಪ್ಪ, ನಾರಾಯಣ ಗೌಡ ಸನ್ಮಾನಿಸಿ ಅಭಿನಂದಿಸಿದರು.
ಜಯ ಸುವರ್ಣ ಅವರ ಸೇವೆ ಅನುಪಮವಾಗಿದ್ದು ಅವರು ಎಂದಿಗೂ ಅಮರರು. ಅವರ ಜೀವನ ಚರಿತ್ರೆ ಸಮಯೋಚಿತವಾಗಿ ಪ್ರಕಾಶಿಸಲಾಗಿದ್ದು ಕೃತಿಕರ್ತೆ ಅನಿತಾ ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ. ಸಮಾಜಕ್ಕೆ ಧೈರ್ಯ ತುಂಬಿದ ಧೀಶಕ್ತಿ ಜಯಣ್ಣ ಆಗಿದ್ದು, ಅವರ ಜೀವನ ಚರಿತ್ರೆ, ಎಲ್ಲಾ ಕೆಲಸಗಳನ್ನು ಬರೆದರೆ ಅದ್ಭುತ ಗ್ರಂಥವೇ ಆಗಬಹುದು. ಅವರ ಸಾಧನೆ ಎಲ್ಲೆ ಮೀರಿದ್ದಾಗಿದೆ ಎಂದು ಗೋಪಾಲ ಶೆಟ್ಟಿ ನುಡಿದರು.
ಡಾ| ತುಕಾರಾಂ ಮಾತನಾಡಿ ನಮ್ಮ ಹಿರಿಯರು ಮುಂಬಯಿಗೆ ಬಂದು ಪಟ್ಟ ಕಷ್ಟಗಳ ಅನುಭವ ಹೊಸ ಪೀಳಿಗೆಗಿಲ್ಲ. ಹಿರಿಯರು ಕಿರಿಯರ ಬೆನ್ನು ಯಾಕೆ ತಟ್ಟಬೇಕು ಎಂಬುವುದನ್ನು ಜಯ ಸುವರ್ಣರಿಂದ ಕಲಿಯಬೇಕು. ಅವರು ಸುಮ್ಮನೆ ಎತ್ತರಕ್ಕೆ ಬೆಳೆಯಲಿಲ್ಲ. ನೋವು ಅನುಭವಿಸಿದವನಿಗೆ ಆ ನೋವಿನ ಅನುಭವ ಕೇಳಬೇಕು. ಮಾನವೀಯ ಗುಣವನ್ನು ಎಳೆ ವಯಸ್ಸಿನಲ್ಲಿ ತೋರಿದ್ದ ಜಯಣ್ಣರ ಸಮಾಜಮುಖಿ ಚಿಂತನೆ ಗುರುತಿಸಲೇಬೇಕು ಎಂದರು.
ಜಯ ಸುವಣರು ನಮ್ಮೆಲ್ಲರ ಅಪ್ತರಾಗಿದ್ದವರು. ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಜಯಣ್ಣರ ಸ್ಮರಣೆ ಮಾಡಲು ಕಾರ್ಯಕ್ರಮದ ಅಗತ್ಯವಿಲ್ಲ. ಅವರು ದಿನಂಪ್ರತಿ ಎಲ್ಲರ ಮನಸ್ಸಿನಲ್ಲಿರುವಂತಹ ವ್ಯಕ್ತಿ. ಗುರುನಾರಾಯಣ ತತ್ವಗಳನ್ನು ಅನುಸರಿಸಿ ಈ ಸಮಾಜಕ್ಕೆ ನೀಡಿದವರು ಎಂದು ಡಾ| ಕಾರ್ನಾಡ್ ತಿಳಿಸಿದರು.
ಜಯ ಸುವರ್ಣರನ್ನು ನಾವು ಕನ್ನಡ ಗುರುಗಳ ಸ್ಥಾನದಲ್ಲಿಟ್ಟಿದ್ದೇವೆ. ಅವರ ಆದರ್ಶಗಳನ್ನು ನಾವು ಮುಂದುವರಿಸಬೇಕು. ಮುಂದೆ ಅವರ ಹೆಸರಲ್ಲಿ ತುಂಬಾ ಉತ್ತಮ ಕೆಲಸಮಾಡುವ ಅಗತ್ಯವಿದೆÀ ಎಂದು ನಾರಾಯಣ ಗೌಡ ತಿಳಿಸಿದರು.
ಜಯಕೃಷ್ಣ ಶೆಟ್ಟಿ ಮಾತನಾಡಿ ಹಿಂದುಳಿದ ಬಿಲ್ಲವ ಸಮುದಾಯವನ್ನು ಮುಂದೆ ತಂದವರು ಜಯ ಸುವರ್ಣರು. ಅದನ್ನು ನಾವು ಎಂದಿಗೂ ಮರೆಯಬಾರದು. ಕೋಟಿ ಚೆನ್ನಯ್ಯರ ಸಂಘರ್ಷ ಜೀವನವನ್ನು ಮೈಗೂಡಿಸಿದ ಅವರು ಗುರುನಾರಾಯಣ ತತ್ವದಂತೆ ಸಂಘಟನೆಯಿಂದ ಸಮಾಜವನ್ನು ಬಲಯುತ ಗೊಳಿದವರು. ಅವರ ಸಂಘರ್ಷ ಜೀವನ ಒಂದು ಹೆಮ್ಮೆಯ ವಿಷಯ ಎಂದರು.
ಜಯ ಸುವರ್ಣರ ದೂರದೃಷ್ಠಿತ್ವ, ಮುಂದಾಳತ್ವದಲ್ಲಿ ಬಿಲ್ಲವರು ಮುಂದೆ ಬಂದಿದ್ದಾರೆ. ತುಂಬಾ ಒಳ್ಳೆಯ ವ್ಯಕ್ತಿತ್ವವುಳ್ಳ ಅವರಿಂದ ನಾವೂ ನಾಯಕತ್ವ ಗುಣಗಳನ್ನು ಹೊಂದಲು ಸಾಧ್ಯವಾಗಿದೆ ಎಂದು ಧರ್ಮಪಾಲ ದೇವಾಡಿಗ ತಿಳಿಸಿದರು.
ಡಾ| ರಾಜಶೇಖರ್ ಮಾತನಾಡಿ ಬಿಲ್ಲವ ಸಮಾಜಕ್ಕೆ ಮಹಾನ್ ಕೊಡುಗೆಯನ್ನಿತ್ತ ಇಬ್ಬರು ವ್ಯಕ್ತಿಗಳಲ್ಲಿ ಜನಾರ್ಧನ ಪೂಜಾರಿ ಮತ್ತು ಜಯ ಸುವರ್ಣರು. ಸಮಾಜಕ್ಕೆ ಅವರ ಕೊಡುಗೆ ಎಂದೂ ಮರೆಯಲಾರದು. ಅವರ ಚಿಂತನಾ ಮಾರ್ಗದಲ್ಲಿ ನಡೆಯುವ ಧರ್ಮ ನಮ್ಮದಾಗಲಿ ಎಂದರು.
ಜಯ ಸುವರ್ಣ ಅವರು ಬರಿ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು. ಅಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಬೇಕಾದರೆ ನಾವೆಲ್ಲರೂ ಪುಣ್ಯ ಮಾಡಬೇಕಾಗಿದೆ. ಜಯಣ್ಣ ಅವರು ಯುವ ಜನಾಂಗಕ್ಕೆ ಮಾದರಿಯಾಗಿದೆ. ಮುಂಬಯಿಯಲ್ಲಿ ಕನ್ನಡ ಉಳಿಸಿ ಬೆಳೆಸುವ ಹೋರಾಟ ಮಾಡುವಂತಹ ವ್ಯಕ್ತಿ ಡಾ| ಉಪಾಧ್ಯ. ವಿಶ್ವ ವಿದ್ಯಾಲಯದಲ್ಲಿ ಸಿಕ್ಕಿದ ಗೌರವ ಅತಿ ದೊಡ್ಡ ಗೌರವವಾಗಿದೆ. ಇಂದಿನ ಸನ್ಮಾನವನ್ನು ಕರ್ನಾಟಕ ಸಂಘ ಡೊಂಬಿವಲಿ ಎಲ್ಲಾ ಸದಸ್ಯರಿಗೆ ಅರ್ಪಿಸುತ್ತೇನೆ ಎಂದು ಗೌರವಕ್ಕೆ ಉತ್ತರಿಸಿ ದಿವಾಕರ ಶೆಟ್ಟಿ ತಿಳಿಸಿದರು.
ಅಶೋಕ ಪಕ್ಕಳ ಗೌರವಕ್ಕೆ ಉತ್ತರಿಸಿ ವಿಶ್ವ ವಿದ್ಯಾಲಯದಂತಹ ಸರಸ್ವತಿ ನೆಲೆಸುವ ಈ ವೇದಿಕೆಯಲ್ಲಿ ನನಗೆ ಕೊಟ್ಟಂತಹ ಸನ್ಮಾನ ನನ್ನ ಭಾಗ್ಯ. ಈ ಸನ್ಮಾನವನ್ನು ನನ್ನ ಮಾತೆಗೆ ಅರ್ಪಿಸುತ್ತೇನೆ ಎಂದರು.
ಇಂದು ನನ್ನ ಪಾಲಿನ ಸಾರ್ಥಕತೆಯ ಸುದಿನ. ಮುಂಬಯಿ ನಗರದಲ್ಲಿ ನಾನು ಸಂಪಾದಿಸಿದ್ದು ತುಳು ಕನ್ನಡಿರ ಪ್ರೀತಿಯಷ್ಟೇ. ನನ್ನ ಸಾಹಿತ್ಯ ಸೇವೆಗೆ, ಈ ಕೃತಿಗೆ ಸಹಕರಿಸಿದವರೆಲ್ಲರಿಗೂ ಸದಾ ಆಭಾರಿ ಎಂದು ಕೃತಿಕರ್ತೆ ಅನಿತಾ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ನುಡಿಗಳನ್ನಾಡಿ ಜಯ ಸುವರ್ಣ ಅವರು ತುಳು ಕನ್ನಡಿಗರ ಅಭಿಮಾನದ ಮೂರ್ತಿ. ಒಂದು ಬೆಳಕಿನ ಪುಂಜವೆಣಿಸಿ ದಾರಿ ದೀಪವಾಗಿ ಮುಂಬಯಿಯಲ್ಲಿ ಬಹುತೇಕರನ್ನು ಬೆಳಗಿಸಿದವರು. ಹೊಸ ಸಮಾಜದ ಸ್ಪೂರ್ತಿ ಚೇತನವಾಗಿದ್ದ ಅವರು ಸಾಹಸ ಸಿಂಹ ಎಂದೆಣಿಸಿದ್ದರು. ಅವರ ಜೀವನದ ಯೋಗದಾನ ನೆನಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಯಣ್ಣರ ಒಟ್ಟು ಸಾಧನೆಯ ದಾಖಲೆ ಮಾಡುವಂತಹ ಕಾರ್ಯ ಇಂದು ನಡೆದಿದೆ. ಅವರ ಪೂರ್ವ ಸಾಧನೆಯನ್ನು ದಾಖಲಿಸಿಸುವಂತಹ ಕೆಲಸ ಇದಾಗಿದೆ ಎಂದರು.
ಸಮಾರಂಭದ ಮುನ್ನ ಜಯ ಸುವರ್ಣ ಪರಿವಾರವನ್ನೊಳಗೊಂಡು ಸೂರ್ಯಕಾಂತ್ ಜೆ.ಸುವರ್ಣ ದೀಪ ಪ್ರಜ್ವಲಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪ್ರತಿಭಾನ್ವಿತ ಕಲಾವಿದರು ಸಾಂಸ್ಕೃತಿಕ ವೈಭವ ಪ್ರದರ್ಶಿಸಿದರು. ಬಳಿಕ ಜಯ ಸುವರ್ಣ ಅವರ ಜೀವನ ಚರಿತ್ರೆÉಯ ಸಾಕ್ಷ ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು. ನಂತರ ಜಯಲೀಲಾ ಟ್ರಸ್ಟ್ನ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾಥಿರ್üಗಳಿಗೆ ಶಿಷ್ಯವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಜಯ ಸುವರ್ಣ ಸುಪುತ್ರರಾದ ನಿಶಿತಾ ಸೂರ್ಯಕಾಂತ್, ಸುಭಾಶ್ ಜೆ.ಸುವರ್ಣ, ಸೌಮ್ಯ ಸುಭಾಶ್, ದಿನೇಶ್ ಜೆ.ಸುವರ್ಣ, ದೀಪ್ತಿ ದಿನೇಶ್, ಯೋಗೇಶ್ ಜೆ.ಸುವರ್ಣ ಮತ್ತು ದೀಪ್ತಿ ಯೋಗೇಶ್ ಹಾಗೂ ಪರಿವಾರ, ಮತ್ತಿತರ ಗಣ್ಯರು, ಪದ್ಮನಾಭ ಪೂಜಾರಿ ಸಿದ್ಧಕಟ್ಟೆ, ಕು| ರಕ್ಷಾ ಪಿ.ಪೂಜಾರಿ ಹಾಜರಿದ್ದರು.
ವಿಶ್ವವಿದ್ಯಾಲಯದ ಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ಡಾ| ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದು ಅತಿಥಿüಗಳಿಗೆ ಗೌರವಿಸಿದರು. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕಿ ಡಾ| ಉಮಾ ರಾಮರಾವ್ `ಸುವರ್ಣಯುಗ’ ಕೃತಿ ಪರಿಚಯಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಹಾಗೂ ಬಿಲ್ಲವರ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Good Friday 2025 | St. Theresa Church, Kemmannu

Way of Cross | St. Theresa Church, Kemmannu

Maundy Thursday | St. Theresa Church, Kemmannu

Palm Sunday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Gregory D’Souza (79 years) | LIVE from Kemmannu

Final Journey of Bernard G D’Souza | LIVE from Moodubelle

Final Journey of Jacintha Serrao (66 years) | LIVE From Sasthan

Earth Angels Kemmannu Unite: Supporting Asha Fernandes on Women’s Day

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ

Final Journey of Joseph Peter Fernandes (64 years) | LIVE From Milagres, Kallianpur, Udupi

ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್

Final Journey of Leo J. Crasto (97 years) | LIVE from Kemmannu, Udupi

Final Journey of Fedrick Lewis (67 years) | LIVE from Santhekatte

Final Journey of Mr. Charles D’Souza (63 years) | LIVE from Udyavar

Final Journey Of Richard Sequeira | Live From Barkur || Kemmannu channel

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

0:24 / 2:30:40 NEW YEAR MASS 2025 | LIVE from Kemmannu | Diocese of Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..

Monti Phest: A Rich Heritage of South Canara - By Fr. Anush D’Cunha SJ
